Skip to main content

ಲೋಕಕ್ಕೆ ಆಮುಷ್ಮಿಕ ಜ್ಞಾನಮಾರ್ಗವನ್ನು ದರ್ಶಿಸಬಲ್ಲ ಸಾಮರ್ಥ್ಯ ಕೇವಲ ಲೌಕಿಕ ಜ್ಞಾನ ಸಂಪಾದನೆಯಿಂದ ಸಾಧ್ಯವಾಗುವುದಿಲ್ಲ.. ಅದಕ್ಕೆ ವ್ಯಕ್ತಿಯೋರ್ವ ದಾರ್ಶನಿಕನಾಗಿರಬೇಕಾಗುತ್ತದೆ.



ಲೋಕದಲ್ಲಿ ಭಾರತೀಯ ಪರಂಪರೆ ಅತಿ ಪ್ರಾಚೀನವಾದದ್ದು, ಪರಮಾತ್ಮ ತತ್ವವನ್ನು ಲೋಕಕ್ಕೆ ಸಾರಿದ್ದು, ಬದುಕಿನಲ್ಲಿ ಐಹಿಕ ಹಾಗೂ ಆಮುಷ್ಮಿಕ ಎಂಬ ಎರಡು ಬದುಕಿನ ತುರೀಯಾವಸ್ಥೆಗಳಿವೆ ಎಂದು ಪ್ರಪಂಚಕ್ಕೆ ಸಾರಿದ್ದು.ಇಲ್ಲಿನ ವೇದಗಳು, ಉಪನಿಷತ್ತುಗಳು, ಶಾಸ್ತ್ರಗಳು, ಪುರಾಣಗಳು, ಮಹಾಕಾವ್ಯಗಳು, ಇನ್ನೂ ಅ ನೇಕ ಸಾಹಿತ್ಯಗಳು ಮನುಷ್ಯನ ಬದುಕಿನಲ್ಲಿನ ಎರಡೂ ಕಾಲ ಘಟ್ಟಗಳ ಕುರಿತು ಮಾಹಿತಿಯನ್ನು ನೀಡುತ್ತವೆ ಮತ್ತು ಅವುಗಳಲ್ಲಿ ಆತ್ಯಂತಿಕವಾಗಿ ಸಾಧಿಸಬೇಕಾದ್ದು ಎರಡನೇಯದಾದ ಆಮುಷ್ಮಿಕ ಅಂದರೆ ಶರೀರಿಯಾಗಿ ಬಾಳಿದ ನಂತರದಲ್ಲಿ ಅವನು ಹೊಂದಬಹುದಾದ ಮೋಕ್ಷದ ಮಾರ್ಗವನ್ನು ಹೆಚ್ಚು ಅವಲಂಬಿಸಿಕೊಂಡಿದೆ ಎಂದು ಸಾರುತ್ತದೆ. ಹಾಗಾಗಿ ಈ ಬದುಕಿನಲ್ಲಿ ಅಂದರೆ ವಾಸ್ತವದ ಬದುಕಿನಲ್ಲಿ ಮುಂದೆ ತಾನು ಗಳಿಸಬೇಕಾದ ಎರಡನೇ ಬದುಕಿನ ಸುಖ ಮಾರ್ಗವನ್ನು ಹೇಗೆಲ್ಲ ಕಂಡುಕೊಳ್ಲಬಹುದು ಎಂಬುದಕ್ಕೆ ಅನೇಕ ಕೈಂಕರ್ಯಗಳನ್ನು ವಿಧಿಗಳನ್ನೂ ಹೇಳಿ ದೆ.. ಅವುಗಳಲ್ಲಿ ವರ್ಣ- ಆಶ್ರಮ- ಧರ್ಮ- ಕಾಯಕ ಎಂಬ ಜೀವನ ವಿಧಾನಗಳೂ. ಸತ್ಯ, ಅಸ್ತೇಯ, ಶ್ರದ್ಧಾ, ಜ್ಞಾನ ಎಂಬ ಕರ್ಮ ವಿಧಾನಗಳೂ ಬಹು ವಿಶದವಾಗಿ ನಿರೂಪಿತವಾಗಿವೆ. ಇದರಲ್ಲಿ ಈ ವರ್ಣಾಶ್ರಮ ಎಂಬುದು ಒಂದನ್ನು ಇನ್ನೊಂದು ಅವಲಂಬಿಸಿ ಬದುಕಲು ಬೇಕಾದ ಸನ್ಮಾರ್ಗವನ್ನು ಹಾಕಿಕೊಟ್ಟ ವಿಚಾರವಾಗಿದೆ. ವರ್ಣದಲ್ಲಿ ಯಾವುದೂ ಕನಿಷ್ಠವೋ ಗರಿಷ್ಠವೋ ಎಂಬುದನ್ನು ತೋರದೇ.. ಕೇವಲ ಸೌಲಭ್ಯಾನುಸಾರವಾಗಿ ಮಾಡಿಕೊಂಡ ವ್ಯವಸ್ಥೆ ಎಂಬುದು ತಿಳಿದುಬರುತ್ತದೆ.. ಎಲ್ಲರೂ ಎಲ್ಲವನ್ನೂ ಮಾಡುತ್ತೇನೆಂದು ಹೊರತಾಗ ಆಗುವ ಅಧ್ವಾನಗಳನ್ನು ತಡೆಯು ವುದಕ್ಕಾಗಿ ಕಾಯಕದ ವಿಂಗಡನೆ ಮಾಡಿದ್ದು ಈ ವ್ಯವಸ್ಥೆಯ ಮೂಲ ಕಾರಣವಾಗಿದೆ. ಆಶ್ರಮಗಳೂ ಕೂಡಾ.. ವ್ಯಕ್ತಿಯ ವಯೋಮಾನ ಮತ್ತು ಜ್ಞಾನದಾರ್ಢ್ಯವನ್ನು ಅವಲಂಬಿಸಿಕೊಂಡು ಲೋಕಕ್ಕೆ ಹಿತವನ್ನು ಯಾವ ಯಾವ ಕಾಲಘಟ್ಟಗಳಲ್ಲಿ ಹೇಗೇಗೆ ಸಾ ಧ್ಯವೋ ಅದನ್ನರಿತು ಮಾಡುವುದಕ್ಕಾಗಿ ವಿಧಿಸಿಕೊಂಡ ಜನಸ್ನೇಹಿ ಸಾಧನವಾಗಿದೆ.. ಅಂದರೆ ಈ ಬ್ರಹ್ಮಚರ್ಯ, ಗಾರ್ಹಸ್ತ್ಯ, ವಾನಪ್ರಸ್ಥ, ಸನ್ಯಾಸಗಳೆಂಬುದು ಸಾಧನಗಳು... ಇವು ಮಾನವನ ಜೀವನೋನ್ನತಿಯನ್ನು ಗಳಿಸಿಕೊಳ್ಳುವಲ್ಲಿ ಸಹಕಾರಿಯಾಗಿ ಕೆಲಸಮಾಡುತ್ತಿರಬೇಕು ಎಂಬುದು ಅಂಬೋಣ..

ಇದು ಎಲ್ಲ ವರ್ಣದಲ್ಲಿಯೂ ಆಯಾ ಕಾಲಘಟ್ಟ- ಮತ್ತು ಜ್ಞಾನ ಪ್ರಾಪ್ತಿಯ ಸ್ಥರವನ್ನು ಅವಲಂಬಿಸಿ ಬೆಳೆದುಕೊಂಡು ಬಂದಿದೆಯಾದರೂ.. ಕಾಲಕ್ರಮೇಣ ಈ ವರ್ಣ ವ್ಯ ವಸ್ಥೆಗೆ ಒಂದು ನಿಬಂಧನೆಯ ಚೌಕಟ್ಟು ಬಂದಾಗ ಅದಕ್ಕೊಂದು ಅರ್ಥವಿವರಣೆ ಕಂಡುಕೊಂಡಾಗ ಶ್ರೀ ಕೃಷ್ಣ ಗೀತೆಯಲ್ಲಿ "ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣ-ಕರ್ಮ ವಿಭಾಗಶಃ"  ಎಂದು ಎಂದಿಗೂ ಹುಟ್ಟಿನಿಂದ ಈ ವರ್ಣಗಳ ಮಾನದಂಡ ವನ್ನು ಹಾಕಿಕೊಳ್ಲಬಾರದು ಎಂದು ಸಾರಿದಂತೆ ಮುಂದೆ ಈ ಆಶ್ರಮ ವ್ಯವಸ್ಥೆಯಲ್ಲೂ ಇದರ ಪ್ರತಿರೂಪ ಕಂಡು ಬಂತು.. ಅದೆಂದರೆ.. ಯಾರು ಯಾರು ಯಾವ ಆಶ್ರಮಗ ಳಲ್ಲಿ ತಮ್ಮನ್ನು ಲೋಕ ಸುಖಕ್ಕೆ ತೊಡಗಿಸಿಕೊಳ್ಲಬಲ್ಲರು ಎಂಬುದು ಅದರಂತೆ ಎಲ್ಲರೂ ಎಲ್ಲಾ ಆಶ್ರಮಗಳನ್ನು ಹೊಂದುವುದಾಗಲೀ, ಅದರ ಮೂಲಕ ಲೋಕಕ್ಕೆ ತಮ್ಮ ಅನುಭವಗಳನ್ನು ಸಾರುವುದಾಗಲೀ ಮಾಡುವಂತಿಲ್ಲ ಎಂಬ ಕಟ್ಟುಪಾಡು ಗಳು ಬಂತು. ಒಂದು ವೇಳೆ ಎಲ್ಲರೂ ಹಾಗೆ ಮಾಡುವಂತಿದ್ದರೆ ಬಹುನಾಯಕತ್ವದ ಕಷ್ಟವನ್ನೆದುರಿಸಬೇಕಾಗುತ್ತದೆ ಎಂಬ ಅರಿವು ಪ್ರಾಚೀನರಿಗೆ ಇತ್ತು ಎಂಬುದು ಇದ ರಿಂದ ತಿಳಿದು ಬರುತ್ತದೆ. 

       ಬ್ರಹ್ಮಚರ್ಯವು ಲೋಕವನ್ನು ಅರಿಯುವುದಕ್ಕಾಗಿ ಇರುವ ಮಹಾ ಮಾರ್ಗವಾ ದರೆ ಅಲ್ಲಿ ವೇದಜ್ಞಾನವನ್ನೂ ಲೋಕ ಜ್ಞಾನವನ್ನೂ  ಐಹಿಕ ಮತ್ತು ಪಾರಮಾರ್ಥಿಕ ಜೀವನ ಮಾರ್ಗಗಳನ್ನು ಅಧ್ಯಯನ ಮಾಡಲು ಈ ಕಾಲಘಟ್ಟವನ್ನು ಉಪಯೋಗಿಸಿ ಕೊಳ್ಲಬೇಕು ಎಂಬುದು ನಿಲುವು. ಇದು.. ಲಾಗಾಯತ್ತಿನಿಂದ ವರ್ಣ ಭೇದವಿಲ್ಲದೇ ನಡೆಯಬೇಕಾದ ಪ್ರಕ್ರಿಯೆ ಎಂಬುದು ವಿದಿತ. ಅದೇ ರೀತಿ ಗಾರ್ಹಸ್ತ್ಯವೂ ಕೂಡಾ.. ಬ್ರಹ್ಮಚರ್ಯದಿಂದ ಗಳಿಸಿದ ಸದ್ಧರ್ಮದ ತಿರುಳನ್ನು ಲೋಕದಲ್ಲಿ ಪ್ರತಿಷ್ಠಾಪಿಸುವು ದಕ್ಕಾಗಿ ಬಳಸಿಕೊಳ್ಲಬೇಕಾದ ಕಾಲಘಟ್ಟ. ಇಲ್ಲಿ ವಿಫುಲಾವಕಾಶಗಳನ್ನು ಒದಗಿಸಿ ಕೊಟ್ಟಿದ್ದು.. ಕೇವಲ ಐಹಿಕ ಭೋಗಕ್ಕಾಗಿ ಮಾತ್ರವಲ್ಲ, ಆಮುಷ್ಮಿಕ ಜ್ಞಾನ ಮತ್ತು ಕರ್ಮ ಫಲ ಸಂಪಾದನೆಗೆ ಸಾಧನವಾಗಿದೆ. ಮುಂದಿನ ವಾನಪ್ರಸ್ಥಾಶ್ರಮವು ತಾನು ಗಳಿಸಿಕೊಂಡ ಜ್ಞಾನದ ಪ್ರಭಾವದಿಂದ ಲೋಕಾಚಾರಗಳ ಸಮೀಕ್ಷೆ ನಡೆಸಿ ಎಲ್ಲೆಲ್ಲಿ ವೈದಿಕ ಮಾರ್ಗವು ವ್ಯಸ್ತಗೊಳ್ಳುತ್ತಿದೆಯೆಂಬುದನ್ನು ಅರಿಯುವುದಕ್ಕಿರುವ ಸಾಧನ ವಾಗಿದೆ. ಆದರೆ ಈ ಹಿಂದಿನ ಮೂರೂ ಆಶ್ರಮಗಳು ಎಲ್ಲ ವರ್ಣದವರಿಗೆ ಹಂಚಿಕೆ ಯಾಗಿದ್ದರೂ.. ಜ್ಞಾನದ ಅನವಗಮನತೆಯ ಪರಿಣಾಮವಾಗಿ ಮುಂದಿನ ಆಶ್ರಮ ವಾದ ಸನ್ಯಾಸಕ್ಕೆ ಕೆಲವು ಬಾಧ್ಯತೆಗಳನ್ನು ನೀಡಲಾಯಿತು.

       ಬ್ರಾಹ್ಮಣನಾದವನಿಗೆ ಮಾತ್ರ ಸನ್ಯಾಸಾಧಿಕಾರ ಪ್ರಾಪ್ತಿಸುವುದು ಎಂಬ ನಿಲು ವನ್ನು ತಳೆದಿದ್ದು ಅವನು ಜ್ಞಾನವನ್ನು ಸಂಪಾದಿಸುವುದರೊಮ್ದಿಗೆ ಹಿಂದಿನ ಮೂರು ಆಶ್ರಮಗಳಲ್ಲಿ ಅಜಾತ ಶತ್ರುತ್ವವನ್ನೂ ಸಂಪಾದಿಸಿಕೊಂಡಿರುತ್ತಾನೆ.. ಸಮಾಜದ ಗೌರವಕ್ಕೆ ಪಾತ್ರನಾಗಿರುತ್ತಾನೆ ಎಂಬ ಕಾರಣಕ್ಕೆ ಅಷ್ಟೇ.. ಇಲ್ಲಿ ನೆನಪಿಡಬೇಕಾದ್ದು.. ಬ್ರಾಹ್ಮಣನೆಂದರೆ ಹುಟ್ಟಿನಿಂದ ಬಂದವನಲ್ಲ..!! ಗುಣ-ಕರ್ಮ ಗಳಿಂದ ಬಂದ ವನು!!! ಹೀಗಿರುವಾಗ.. ಈ ಸನ್ಯಾಸವನ್ನು ಲೋಕದಲ್ಲಿ ಅಬ್ರಾಹ್ಮಣರು ಪಡೆದುಕೊ ಳ್ಲುವುದಕ್ಕೆ ಪ್ರಾರಂಭಿಸಿದ ಮೇಲೆ.. ಆ ಆಶ್ರಮದ ಮಹತ್ವ ಕಡಿಮೆಯಾಗತೊಡಗಿದ್ದರಲ್ಲಿ ಆಶ್ಚರ್ಯವೇನಿಲ್ಲ..ಅದಲ್ಲದೇ ಇಲ್ಲಿ ಕೇವಲ ಬ್ರಾಹ್ಮಣನಾದವನು ಮಾತ್ರ ಸನ್ಯಾಸ ಸ್ವೀಕರಿಸಬೇಕು ಎಂಬ ನಿಲುವಿನೊಂದಿಗೆ, ಹಿಂದಿನ ಮೂರು ಆಶ್ರಮಗ ಳನ್ನೂ ಅತೀತವಾಗಿಸಿ.. ಬ್ರಹ್ಮಚರ್ಯದಿಂದಲೂ ನೇರವಾಗಿ ಸನ್ಯಾಸಕ್ಕೆ ಅರ್ಹತೆ ಯನ್ನು ಹೊಂದಬಲ್ಲ ಎಂಬ ಶ್ರುತಿ ವಾಕ್ಯವು ಇತ್ತೀಚೆಗೆ ಆ ಬ್ರಹ್ಮ ಚರ್ಯ ಮತ್ತು ಸನ್ಯಾಸ ಭಾವದ ಪೂರ್ವ ಮಜಲುಗಳನ್ನು ಮರೆತದ್ದರಿಂದಾಗಿ ಸನ್ಯಾಸವು ಕಳೆಗುಂ ದುತ್ತಿದೆ...ಲೋಕಕ್ಕೆ ಆಮುಷ್ಮಿಕ ಜ್ಞಾನಮಾರ್ಗವನ್ನು ದರ್ಶಿಸಬಲ್ಲ ಸಾಮರ್ಥ್ಯ ಕೇವಲ ಲೌಕಿಕ ಜ್ಞಾನ ಸಂಪಾದನೆಯಿಂದ ಸಾಧ್ಯವಾಗುವುದಿಲ್ಲ.. ಅದಕ್ಕೆ ವ್ಯಕ್ತಿಯೋರ್ವ ದಾರ್ಶನಿಕನಾಗಿರಬೇಕಾಗುತ್ತದೆ.

Comments

Popular posts from this blog

ಶ್ರೀ ಚಕ್ರ ಮತ್ತು ಅದರ ಮಹಿಮೆ

ಶ್ರೀಚಕ್ರ ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಸೃಷ್ಟಿಯ ಜನನಿ ಶ್ರೀ ಲಲಿತೆಯ ಮೂರ್ತ ರೂಪದ ರೇಖಾಯಂತ್ರ. ಆದಿ ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ ಶಕ್ತಿದೇವಿಯ ಸಾತ್ವಿಕ ರೂಪವು ಉಗಮಿಸುವಂತೆ ಮಾಡಿದರು. ಕ್ರಮಬದ್ಧವಾಗಿ ರಚಿಸಿದ ಶ್ರೀಚಕ್ರದ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀಲಲಿತಾ ದೇವಿಯ ಚಿತ್ರ ಗೋಚರಿಸಿದ್ದು ದಾಖಲಾಗಿದೆ. ಜೊತೆಗೆ ಶಬ್ಧವನ್ನು ದೃಶ್ಯರೂಪವಾಘಿ ಪರಿವರ್ತಿಸುವ ವಿಜ್ಞಾನ ಶಬ್ಧ ಹಾಗೂ ಕಂಪನಗಳ ಪ್ರಭಾವದ ಅರಿವು ಮೂಡಿಸುತ್ತಿದೆ, ಶ್ರೀಚಕ್ರದ ಮೇಲೆ ಇಟ್ಟ ದೃಷ್ಟಿ ನರಮಂಡಲದಲ್ಲಿ ಉಂಟಾಗುವ ಕಂಪನ ಇಇಜಿಯಲ್ಲಿ (ಎಲೆಕ್ಟ್ರೋ ಎನ್ ಕೆಫಲೋಗ್ರಾಫ್) ಆಲ್ಫಾ ಅಲೆ ಹೊರಡಿಸುತ್ತದೆ. ಧ್ಯಾನ ಸ್ಥಿತಿಯಲ್ಲೂ ಈ ಅಲೆ ನಿಧಾನಗತಿಯಲ್ಲಿ ಹೊರಹೊಮ್ಮುತ್ತದೆ, ಯಾವುದೇ ಇತರ ಚಕ್ರ ವೀಕ್ಷಿಸಿದಾಗ ಇಇಜಿ ಅಲೆಗಳಲ್ಲಿ ಬದಲಾವಣೆ ಕಂಡುಬರುವುದಿಲ್ಲ, ಶಕ್ತಿಯುತ ಅಣು ಕ್ಷಣಗಳಿಂದಾದ ಅಲೆ ವಿದ್ಯುತ್ ಅಯಸ್ಕಾಂತ ಬಲಕಾರಕ ಶಕ್ತಿ ಸಮಾಗಮಕ್ಕೆ ನಾಂದಿ, ಶ್ರೀಚಕ್ರದ ಮೂಲಕ ದಿವ್ಯ ಮಂತ್ರೋಚ್ಚಾರಗಳಿಂದಾದ ಶಬ್ಧ ಬ್ರಹ್ಮ ಶಕ್ತಿ ಇದನ್ನು ಸಾಧಿಸುತ್ತದೆಂದು ಭಾವಿಸಬಹುದು, ಒಂದು ದೃಷ್ಟಿಯಲ್ಲಿ ಆದಿ ಶಂಕರಾಚಾರ್ಯರನ್ನು ಕಣ ಭೌತ ಶಾಸ್ತ್ರದ ಪಿತಾಮಹ ಎನ್ನಬಹುದು. ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನೇ ನಿಗ್ರಹಿಸಿದರು, ಶ್ರೀ ಸೌಂದ...

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ ಅಂದರೆ .. ಎಂಜಲು, ಶಿವನ ನಿರ್ಮಾಲ್ಯ, ವಾಂತಿ, ಹೆಣದ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದ್ದು. ಈ ಐದು ಅತ್ಯಂತ ಪವಿತ್ರವಾದವುಗಳು...!! ಎಂದು . ೧. ಉಚ್ಚಿಷ್ಟಮ್ - ಎಂದರೆ ಎಂಜಲು . ಹಾಲು ಕರುವಿನ ಎಂಜಲು. ಹಸುವಿನ ಹಾಲನ್ನು ಕರು ಕುಡಿದು ಹಾಗೇ ಬಿಟ್ಟಿರುತ್ತದೆ . ಆ ಎಂಜಲು ಹಾಲನ್ನೇ ನಾವು ಉಪಯೋಗಿಸುತ್ತೇವೆ. ಕರುವಿನಿಂದ ಎಂಜಲಾದ ಹಾಲು ದೇವರಿಗೆ , ಪಂಚಾಮೃತಾಭಿಷೇಕಕ್ಕೆ ಬೇಕಾದ ಅತ್ಯಂತ ಪವಿತ್ರ ವಸ್ತು. ೨. ಶಿವನಿರ್ಮಾಲ್ಯಮ್ - ಎಂದರೆ ಶಿವನ ಜಟೆಯಿಂದ ಹೊರಗೆ ಬಂದ ಗಂಗೆ . ಗಂಗಾ ನದಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವಾಗ ಅಹಂಕಾರದಿಂದ ಬರುತ್ತಿದ್ದಳು . ಆಗ ಗಂಗೆಯ ಗರ್ವವನ್ನು ದಮನ ಮಾಡುವುದಕ್ಕಾಗಿ ಪರಶಿವನು ಆ ಗಂಗೆಯನ್ನು ತನ್ನ ಜಟೆಯ ಮಧ್ಯೆ ಕಟ್ಟಿಹಾಕಿಬಿಟ್ಟ.  ಅನಂತರ ಆ ಜಟೆಯಿ೦ದ ಗಂಗಾನದಿಯನ್ನು ಹೊರಕೆ ಹಾಕಿದ.  ಶಿವನ ಜಟೆಯಲ್ಲಿದ್ದು ಅಲ್ಲಿಂದ ಮುಕ್ತಳಾದ್ದರಿಂದ ಗಂಗಾನದಿಯು ಶಿವನ ನಿರ್ಮಾಲ್ಯವಾಯಿತು.  ಆದರೂ ಈ ಗಂಗೆಯು ಪವಿತ್ರ. ೩. ವಮನಮ್ - ಎಂದರೆ ವಾಂತಿ . ಜೇನುತುಪ್ಪ . ಜೇನುಹುಳುಗಳು ಬೇರೆಬೇರೆಯ ಗಿಡಮರಗಳಿಂದ ಮಕರಂದವನ್ನು ಬಾಯಲ್ಲಿ ಹಿಡಿದು ತಂದು,  ಬಾಯಿಂದಲೇ ಆ ಮಕರಂದವನ್ನು ಗೂಡಿನಲ್ಲಿ ಇಟ್ಟಿರುತ್ತವೆ.  ಅದೇ ಜೇನು ತುಪ್ಪ.  ಇದು ಜೇನುಹುಳುಗಳ ವಮನ. ಆದರೆ ಜೇನು...

ಶ್ರೀ ದಕ್ಷಿಣ ಕಾಳಿ ಮಹಾತ್ಮೆ

ಶ್ರೀ ದಕ್ಷಿಣ ಕಾಳಿ ಮಹಾತ್ಮೆ( ದಶಮಹಾ ವಿದ್ಯೆಯ ಮೊದಲ ಸಾಧನೆ) ದೇವಾದಿ ದೇವತೆಗಳೆಲ್ಲರೂ ಸೇರಿ ಕೈಲಾಸದಲ್ಲಿ ಪಾರ್ವತಿ ಪರಮೇಶ್ವರರನ್ನು ಸ್ತುತಿಸುತ್ತಿದ್ದರು. ತುಂಬುರು ನಾರದರು ವೀಣೆಯನ್ನು ನುಡಿಸುತ್ತಾ  ನಂದಿಯು ಮೃದಂಗ ವಾದ್ಯ ನುಡಿಸಿ ತಿಲೊತ ಮಾದಿಗಳು ನರ್ತನ ಮಾಡುತ್ತಾ ಸನಕಾದಿ ಋಷಿಗಳು ವೇದ ಮಂತ್ರ ಪಾರಾಯಣ ಮಾಡುತ್ತಾ ರಾಕ್ಷಸರು ಪರಶಿವನ ಮಂತ್ರವನ್ನು ಜಪಿಸುತ್ತ ಅಷ್ಟದಿಕ್ಪಾಲಕರು ಸ್ವಾಮಿಯ ಸೇವೆಯನ್ನು ಯಥೋಚಿತವಾಗಿ ಮಾಡುತ್ತಾ ಬೃಂಗಿ ರಿಟಾಧಿಗಳು ಸುಶ್ರಾವ್ಯವಾಗಿ ಸಾಮಗಾನ ಮಾಡುತ್ತಿದ್ದರು . ಅಂತಹ ವಿಜ್ರಂಭನೆ ನಡೆಯುತ್ತಿರುವಾಗ ಭೂಲೋಕದಿಂದ ಬಂದ ನಾರದರು ಕೈಲಾಸದಲ್ಲಿ ಶಿವನನ್ನು ಕಂಡು ವಂದಿಸಿದರು. ಶಿವನು ಅವರಿಗೆ ಅಘ್ಯಾದಿಗಳನ್ನು ಕೊಟ್ಟು ಆಸನದಲ್ಲಿ ಕೂರಿಸಿ ಸತ್ಕರಿಸಿದನು ಸಂತುಷ್ಟರಾದ ನಾರದರು ಪರಶಿವನನ್ನು ಕೊಂಡಾಡಿದರು ಅವರು ಸ್ವಲ್ಪ ಅಸಮಾಧಾನ ತೋರಿದ್ಂತಿದ್ದರು . ಆಗ ಶಿವನು ನಾರದನನ್ನು ಕುರಿತು ಬ್ರಹ್ಮರ್ಷಿಗಳೆ ತಾವು ಈ ರೀತಿ ಅಸಮಾಧಾನ ಪಟ್ಟಿರುವುದಕ್ಕೆ ಕಾರಣವೇನು ಎಂದು ಒತ್ತಾಯಿಸಿ ಕೇಳಿದನು. ಆಗ ನಾರದರು ಸ್ವಲ್ಪ ತಲೆ ಬಗ್ಗಿಸಿ ದೇವ ದೇವ ಪ್ರಪಂಚದಲ್ಲೆಲ್ಲಾ ಇನ್ನ ಕೀರ್ತಿ ಭಜನೆ ಆರಾಧನೆಗಳು ವಿಶೇಷವಾಗಿ ನಡೆಯುತ್ತಿದೆ ನಾನು ಕೂಡ ಅದನ್ನು ನೋಡಿ ತೃಪ್ತಿ ಪಟ್ಟೆನು. ಅಂತಹ ಸಮಯದಲ್ಲಿ ನಿಮ್ಮನ್ನೇ ದಿಕ್ಕರಿಸಿದ ಒಂದು ಅವಕಾಶವನ್ನು ನಾನು ನೋಡಿ ಬಂದೆನು ಎಂದು ಹೇಳಿ ತಲೆ ತಗ್ಗಿಸಿದರು. ಶಿವನು ಬಲತ್ಕಾರವಾಗಿ ನ...