Skip to main content

ಆತ್ಮದರ್ಶನ

 ಏನು ಮನುಷ್ಯ ಜನ್ಮದ ಉದ್ದೇಶ ?

ನದಿಯೆಲ್ಲೇ ಹುಟ್ಟಲಿ ಕೊನೆಗೆ ಸೇರುವುದು ಸಾಗರವನ್ನೇ.ಮನುಷ್ಯನೆಷ್ಟೇ ದೊಡ್ಡವನಾಗಿರಲಿ ಕೊನೆಗೆ ಸೇರುವುದು ಮಸಣವನ್ನೇ..!!

ಜಾತಸ್ಯ ಹಿ ಧ್ರುವೋ ಮೃತ್ಯುಃ.ಹುಟ್ಟಿದ ಕೂಡಲೇ ಸಾವು ನಿಶ್ಚಯ.ಮೃತ್ಯು ಯಾರನ್ನು ಕೇಳಿ,ಅಂಗಲಾಚಿ ಬರುವುದಿಲ್ಲ.ಸಾವಿರದ ಮನೆಯ ಸಾಸಿವೆಯೇ ಇಲ್ಲ.ಆದರೂ ಎಂತಹ ಮೂಢರು ನಾವು.ಸಾವನ್ನೇ ಮರೆತು,ಪ್ರಪಂಚದ ವೈಭೋಗದಲ್ಲಿ ಮನುಷ್ಯ ಜನ್ಮದ ಉದ್ದೇಶವನ್ನೇ ಮರೆತು ಜೀವಿಸುತ್ತಿದ್ದೇವೆ..!!

ಪುನರ್ಜನ್ಮವನ್ನು ನಂಬುವವರು ನಾವು.ಹಾಗಾಗಿ ಎಲ್ಲ ಜನ್ಮಗಳಲ್ಲೂ ಮನುಷ್ಯಜನ್ಮವೇ ಶ್ರೇಷ್ಟ.”ಜಂತೂನಾಂ ನರಜನ್ಮ ದುರ್ಲಭಮ್”.ಈ ಮನುಷ್ಯ ಜನ್ಮ ಬಹಳ ಸುಲಭವಾಗಿ ಸಿಕ್ಕಿದ್ದಲ್ಲ ಸ್ವಾಮೀ. ಹಲವಾರು ಜನ್ಮಗಳ ಪುಣ್ಯದ ಫಲ. ಭಗವಂತ ಮನುಷ್ಯನಿಗಷ್ಟೇ ವಿಶೇಷವಾದ ಜ್ಞಾನವನ್ನು ಕೊಟ್ಟ.ಜಗತ್ತಿನ ಸಕಲ ಚರಾಚರಗಳನ್ನು ನಿರ್ವಹಿಸುವ ದೊಡ್ಡ ಜವಾಬ್ದಾರಿ ಕೊಟ್ಟ.ಆದರೆ ಆ ಜವಾಬ್ದಾರಿಯನ್ನು ನಾವು ಸರಿಯಾಗಿ ನಿರ್ವಹಿಸುತ್ತಿದ್ದೇವಾ..?ಪ್ರಾಣಿಗಳೂ ಕಚ್ಚಾಡುತ್ತವೆ.ಹಾಗೇ ನಾವೂ ಕಚ್ಚಾಡುತ್ತಿದ್ದೇವೆ.ಅಂದಮೇಲೆ ಮನುಷ್ಯನಿಗೂ,ಪ್ರಾಣಿಗಳಿಗೂ ಏನು ವ್ಯತ್ಯಾಸ..?

ಹಾಗಾದರೆ,ಮನುಷ್ಯಜನ್ಮದ ಉದ್ದೇಶ..?ಸುಖೋಪಭೋಗವೇ...?ಕೇವಲ ಅದಕ್ಕಾಗಿಯೇ ಇಲ್ಲಿಗೆ ಬಂದಿದ್ದೇವೆಯೇ..?ತಿಂದುಂಡು ಮಜಾ ಮಾಡಿ,ಯಾರಿಗೂ ಕೊಡದೇ ಶೇಖರಿಸಿ ಕೊನೆಗೆ ಬರಿಗೈಯ್ಯಲ್ಲಿ ನಡೆಯುವುದೇ..?

ಖಂಡಿತಾ ಅಲ್ಲ..

ಮನುಷ್ಯಜನ್ಮ ಸಾರ್ಥಕ್ಯವನ್ನು ಪಡೆಯಬೇಕು..ಅದಕ್ಕೇನು ಮಾಡಬೇಕು..? ಅದಕ್ಕೊಂದೇ ಪರಿಹಾರ ಆಧ್ಯಾತ್ಮ.ಆಧ್ಯಾತ್ಮವೆಂದರೆ ಅತ್ಮಕ್ಕೆ ಅಧೀನನಾಗಿರುವುದು.ಆಧ್ಯಾತ್ಮವೆಂಬುದು ಪುಸ್ತಕದ ಬದನೆಕಾಯಿ ಎಂಬುದು ಹಲವರ ವಾದ.“ಆಧ್ಯಾತ್ಮ ಕೇವಲ ವಯಸ್ಸಾದವರಿಗೆ” ತಪ್ಪು ಅಭಿಪ್ರಾಯ.ಆದರೆ,ಮನುಷ್ಯನಲ್ಲಿ ಇರಲೇಬೇಕದ ವಸ್ತು ಆಧ್ಯಾತ್ಮ ಚಿಂತನೆ. ಅಷ್ಟಕ್ಕೂ ಏನಿದೆ ಈ ಬದುಕಿನಲ್ಲಿ..?

ಅಧಿಕಾರವಿರುವವರು ಹೇಳಬಹುದು,ಅಧಿಕಾರವಿದೆ.ಹಣವಿರುವವರು ಹೇಳಬಹುದು,ಹಣವಿದೆ.ನೂರು ಜನ ನೂರು ಕಾರಣಗಳನ್ನು ಹೇಳಬಹುದು.ನಿಜ..ಎಲ್ಲವೂ ಇದೆ.ಆದರೆ ಮನದಲ್ಲಿ ಅವ್ಯಕ್ತ ಆನಂದವಿಲ್ಲ.ಆ ಅವ್ಯಕ್ತ ಆನಂದವೆಲ್ಲಿ ಸಿಗಬಹುದು..?

ನಿಜ ಅದು ಕೇವಲ ಆಧ್ಯಾತ್ಮದಲ್ಲಿ. ನಮ್ಮ ದಾರ್ಶನಿಕರ ಪ್ರಕಾರ ಶರೀರ,ಪಂಚೇಂದ್ರಿಯಗಳು,ಮನಸ್ಸು ಪ್ರಮುಖವಲ್ಲ.ಹೆಚ್ಚಿನ ಪ್ರಾಮುಖ್ಯತೆ ಆತ್ಮಕ್ಕೇ.“ಆತ್ಮಾ ಏವ ಸತ್” ಆತ್ಮವನ್ನು ಸಮೀಪಿಸುವುದು ಆಧ್ಯಾತ್ಮ. ಆತ್ಮಕ್ಕೆ ಸುಖವಿಲ್ಲ,ಕಷ್ಟವಿಲ್ಲ,ಸಾವು,ನೋವುಗಳೂ ಇಲ್ಲ.ಆತ್ಮವನ್ನು ಅರಿತವನಿಗೂ ಸುಖದುಃಖಗಳಿಲ್ಲ.ಆತ್ಮವನ್ನು ಅರಿತವನು ಆತ್ಮತತ್ವಜ್ಞಾನಿ.ಆತ್ಮತತ್ವಜ್ಞಾನಿಗೆ ಭಯ,ದುಃಖ,ನೋವುಗಳಿಲ್ಲ.ಆತ ಸದಾನಂದ.ಅಂತವರಿಗೆ ಈ ಪ್ರಪಂಚ,ಚರಾಚರವಸ್ತುಗಳಲ್ಲಿ ಬೇಧವಿಲ್ಲವೆನಿಸುತ್ತದೆ.ಸಮಸ್ತ ವಿಶ್ವವೂ ನಮ್ಮದೆಂದೆನಿಸುತ್ತದೆ.ಅಂತಹ ಆತ್ಮತತ್ವಜ್ಞಾನವನ್ನರಿಯುವ ಪ್ರಯತ್ನ ನಮ್ಮದಾಗಿರಲಿ



Comments

Popular posts from this blog

ಶ್ರೀ ಚಕ್ರ ಮತ್ತು ಅದರ ಮಹಿಮೆ

ಶ್ರೀಚಕ್ರ ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಸೃಷ್ಟಿಯ ಜನನಿ ಶ್ರೀ ಲಲಿತೆಯ ಮೂರ್ತ ರೂಪದ ರೇಖಾಯಂತ್ರ. ಆದಿ ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ ಶಕ್ತಿದೇವಿಯ ಸಾತ್ವಿಕ ರೂಪವು ಉಗಮಿಸುವಂತೆ ಮಾಡಿದರು. ಕ್ರಮಬದ್ಧವಾಗಿ ರಚಿಸಿದ ಶ್ರೀಚಕ್ರದ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀಲಲಿತಾ ದೇವಿಯ ಚಿತ್ರ ಗೋಚರಿಸಿದ್ದು ದಾಖಲಾಗಿದೆ. ಜೊತೆಗೆ ಶಬ್ಧವನ್ನು ದೃಶ್ಯರೂಪವಾಘಿ ಪರಿವರ್ತಿಸುವ ವಿಜ್ಞಾನ ಶಬ್ಧ ಹಾಗೂ ಕಂಪನಗಳ ಪ್ರಭಾವದ ಅರಿವು ಮೂಡಿಸುತ್ತಿದೆ, ಶ್ರೀಚಕ್ರದ ಮೇಲೆ ಇಟ್ಟ ದೃಷ್ಟಿ ನರಮಂಡಲದಲ್ಲಿ ಉಂಟಾಗುವ ಕಂಪನ ಇಇಜಿಯಲ್ಲಿ (ಎಲೆಕ್ಟ್ರೋ ಎನ್ ಕೆಫಲೋಗ್ರಾಫ್) ಆಲ್ಫಾ ಅಲೆ ಹೊರಡಿಸುತ್ತದೆ. ಧ್ಯಾನ ಸ್ಥಿತಿಯಲ್ಲೂ ಈ ಅಲೆ ನಿಧಾನಗತಿಯಲ್ಲಿ ಹೊರಹೊಮ್ಮುತ್ತದೆ, ಯಾವುದೇ ಇತರ ಚಕ್ರ ವೀಕ್ಷಿಸಿದಾಗ ಇಇಜಿ ಅಲೆಗಳಲ್ಲಿ ಬದಲಾವಣೆ ಕಂಡುಬರುವುದಿಲ್ಲ, ಶಕ್ತಿಯುತ ಅಣು ಕ್ಷಣಗಳಿಂದಾದ ಅಲೆ ವಿದ್ಯುತ್ ಅಯಸ್ಕಾಂತ ಬಲಕಾರಕ ಶಕ್ತಿ ಸಮಾಗಮಕ್ಕೆ ನಾಂದಿ, ಶ್ರೀಚಕ್ರದ ಮೂಲಕ ದಿವ್ಯ ಮಂತ್ರೋಚ್ಚಾರಗಳಿಂದಾದ ಶಬ್ಧ ಬ್ರಹ್ಮ ಶಕ್ತಿ ಇದನ್ನು ಸಾಧಿಸುತ್ತದೆಂದು ಭಾವಿಸಬಹುದು, ಒಂದು ದೃಷ್ಟಿಯಲ್ಲಿ ಆದಿ ಶಂಕರಾಚಾರ್ಯರನ್ನು ಕಣ ಭೌತ ಶಾಸ್ತ್ರದ ಪಿತಾಮಹ ಎನ್ನಬಹುದು. ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನೇ ನಿಗ್ರಹಿಸಿದರು, ಶ್ರೀ ಸೌಂದ...

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ ಅಂದರೆ .. ಎಂಜಲು, ಶಿವನ ನಿರ್ಮಾಲ್ಯ, ವಾಂತಿ, ಹೆಣದ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದ್ದು. ಈ ಐದು ಅತ್ಯಂತ ಪವಿತ್ರವಾದವುಗಳು...!! ಎಂದು . ೧. ಉಚ್ಚಿಷ್ಟಮ್ - ಎಂದರೆ ಎಂಜಲು . ಹಾಲು ಕರುವಿನ ಎಂಜಲು. ಹಸುವಿನ ಹಾಲನ್ನು ಕರು ಕುಡಿದು ಹಾಗೇ ಬಿಟ್ಟಿರುತ್ತದೆ . ಆ ಎಂಜಲು ಹಾಲನ್ನೇ ನಾವು ಉಪಯೋಗಿಸುತ್ತೇವೆ. ಕರುವಿನಿಂದ ಎಂಜಲಾದ ಹಾಲು ದೇವರಿಗೆ , ಪಂಚಾಮೃತಾಭಿಷೇಕಕ್ಕೆ ಬೇಕಾದ ಅತ್ಯಂತ ಪವಿತ್ರ ವಸ್ತು. ೨. ಶಿವನಿರ್ಮಾಲ್ಯಮ್ - ಎಂದರೆ ಶಿವನ ಜಟೆಯಿಂದ ಹೊರಗೆ ಬಂದ ಗಂಗೆ . ಗಂಗಾ ನದಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವಾಗ ಅಹಂಕಾರದಿಂದ ಬರುತ್ತಿದ್ದಳು . ಆಗ ಗಂಗೆಯ ಗರ್ವವನ್ನು ದಮನ ಮಾಡುವುದಕ್ಕಾಗಿ ಪರಶಿವನು ಆ ಗಂಗೆಯನ್ನು ತನ್ನ ಜಟೆಯ ಮಧ್ಯೆ ಕಟ್ಟಿಹಾಕಿಬಿಟ್ಟ.  ಅನಂತರ ಆ ಜಟೆಯಿ೦ದ ಗಂಗಾನದಿಯನ್ನು ಹೊರಕೆ ಹಾಕಿದ.  ಶಿವನ ಜಟೆಯಲ್ಲಿದ್ದು ಅಲ್ಲಿಂದ ಮುಕ್ತಳಾದ್ದರಿಂದ ಗಂಗಾನದಿಯು ಶಿವನ ನಿರ್ಮಾಲ್ಯವಾಯಿತು.  ಆದರೂ ಈ ಗಂಗೆಯು ಪವಿತ್ರ. ೩. ವಮನಮ್ - ಎಂದರೆ ವಾಂತಿ . ಜೇನುತುಪ್ಪ . ಜೇನುಹುಳುಗಳು ಬೇರೆಬೇರೆಯ ಗಿಡಮರಗಳಿಂದ ಮಕರಂದವನ್ನು ಬಾಯಲ್ಲಿ ಹಿಡಿದು ತಂದು,  ಬಾಯಿಂದಲೇ ಆ ಮಕರಂದವನ್ನು ಗೂಡಿನಲ್ಲಿ ಇಟ್ಟಿರುತ್ತವೆ.  ಅದೇ ಜೇನು ತುಪ್ಪ.  ಇದು ಜೇನುಹುಳುಗಳ ವಮನ. ಆದರೆ ಜೇನು...

ಶ್ರೀ ದಕ್ಷಿಣ ಕಾಳಿ ಮಹಾತ್ಮೆ

ಶ್ರೀ ದಕ್ಷಿಣ ಕಾಳಿ ಮಹಾತ್ಮೆ( ದಶಮಹಾ ವಿದ್ಯೆಯ ಮೊದಲ ಸಾಧನೆ) ದೇವಾದಿ ದೇವತೆಗಳೆಲ್ಲರೂ ಸೇರಿ ಕೈಲಾಸದಲ್ಲಿ ಪಾರ್ವತಿ ಪರಮೇಶ್ವರರನ್ನು ಸ್ತುತಿಸುತ್ತಿದ್ದರು. ತುಂಬುರು ನಾರದರು ವೀಣೆಯನ್ನು ನುಡಿಸುತ್ತಾ  ನಂದಿಯು ಮೃದಂಗ ವಾದ್ಯ ನುಡಿಸಿ ತಿಲೊತ ಮಾದಿಗಳು ನರ್ತನ ಮಾಡುತ್ತಾ ಸನಕಾದಿ ಋಷಿಗಳು ವೇದ ಮಂತ್ರ ಪಾರಾಯಣ ಮಾಡುತ್ತಾ ರಾಕ್ಷಸರು ಪರಶಿವನ ಮಂತ್ರವನ್ನು ಜಪಿಸುತ್ತ ಅಷ್ಟದಿಕ್ಪಾಲಕರು ಸ್ವಾಮಿಯ ಸೇವೆಯನ್ನು ಯಥೋಚಿತವಾಗಿ ಮಾಡುತ್ತಾ ಬೃಂಗಿ ರಿಟಾಧಿಗಳು ಸುಶ್ರಾವ್ಯವಾಗಿ ಸಾಮಗಾನ ಮಾಡುತ್ತಿದ್ದರು . ಅಂತಹ ವಿಜ್ರಂಭನೆ ನಡೆಯುತ್ತಿರುವಾಗ ಭೂಲೋಕದಿಂದ ಬಂದ ನಾರದರು ಕೈಲಾಸದಲ್ಲಿ ಶಿವನನ್ನು ಕಂಡು ವಂದಿಸಿದರು. ಶಿವನು ಅವರಿಗೆ ಅಘ್ಯಾದಿಗಳನ್ನು ಕೊಟ್ಟು ಆಸನದಲ್ಲಿ ಕೂರಿಸಿ ಸತ್ಕರಿಸಿದನು ಸಂತುಷ್ಟರಾದ ನಾರದರು ಪರಶಿವನನ್ನು ಕೊಂಡಾಡಿದರು ಅವರು ಸ್ವಲ್ಪ ಅಸಮಾಧಾನ ತೋರಿದ್ಂತಿದ್ದರು . ಆಗ ಶಿವನು ನಾರದನನ್ನು ಕುರಿತು ಬ್ರಹ್ಮರ್ಷಿಗಳೆ ತಾವು ಈ ರೀತಿ ಅಸಮಾಧಾನ ಪಟ್ಟಿರುವುದಕ್ಕೆ ಕಾರಣವೇನು ಎಂದು ಒತ್ತಾಯಿಸಿ ಕೇಳಿದನು. ಆಗ ನಾರದರು ಸ್ವಲ್ಪ ತಲೆ ಬಗ್ಗಿಸಿ ದೇವ ದೇವ ಪ್ರಪಂಚದಲ್ಲೆಲ್ಲಾ ಇನ್ನ ಕೀರ್ತಿ ಭಜನೆ ಆರಾಧನೆಗಳು ವಿಶೇಷವಾಗಿ ನಡೆಯುತ್ತಿದೆ ನಾನು ಕೂಡ ಅದನ್ನು ನೋಡಿ ತೃಪ್ತಿ ಪಟ್ಟೆನು. ಅಂತಹ ಸಮಯದಲ್ಲಿ ನಿಮ್ಮನ್ನೇ ದಿಕ್ಕರಿಸಿದ ಒಂದು ಅವಕಾಶವನ್ನು ನಾನು ನೋಡಿ ಬಂದೆನು ಎಂದು ಹೇಳಿ ತಲೆ ತಗ್ಗಿಸಿದರು. ಶಿವನು ಬಲತ್ಕಾರವಾಗಿ ನ...