Skip to main content

Posts

Showing posts from 2018

ಬ್ರಾಹ್ಮಣ ಅಂದರೆ ಏನು?

ಬ್ರಾಹ್ಮಣ ಅಂದರೆ ಏನು ಎಂಬುದನ್ನು ಪರೀಕ್ಷಿಸೋಣ.. ಅದು ಒಂದು ಜೀವವೆ?ಅಥವಾ ಅದು ಶರೀರವೆ? ಇಲ್ಲಾ  ಅದೊಂದು ವರ್ಗವೆ? ಜ್ಞಾನವೆ? ಕರ್ಮವೆ? ಅಥವಾ ಅದೊಂದು ಧಾರ್ಮಿಕ ಕ್ರಿಯೆಯೆ?ಯಾವುದನ್ನು ಬ್ರಾಹ್ಮಣ ಎನ್ನುತ್ತೇವೆ ??ನೋಡೋಣ... ಜೀವವು ಬ್ರಾಹ್ಮಣವೆ? ಎಂದು ಪ್ರಾರಂಭಿಸಿದರೆ ಉತ್ತರ ಅಲ್ಲ ಎಂದಾಗುತ್ತದೆ. ಯಾಕೆಂದರೆ ಪೂರ್ವಜನ್ಮ ಹಾಗೂ ಪುನರ್ಜನ್ಮಗಳಲ್ಲಿ ಅದೇ ಜೀವ ಮುಂದುವರಿಯುತ್ತದೆ. ಪ್ರಾರಬ್ಧ ಕರ್ಮದಿಂದ ಕೆಲವೊಮ್ಮೆ  ವಿಭಿನ್ನ ಪ್ರಾಣಿ ಪಕ್ಷಿಗಳಾಗಿಯೂ ಅದೇ ಜೀವ ಮುಂದುವರಿಯುವುದರಿಂದ ಜೀವ ಎಂಬುದು ಬ್ರಾಹ್ಮಣ ಅಲ್ಲ. ಹಾಗಾದರೆ ದೇಹ ಬ್ರಾಹ್ಮಣವೆ?  ಅಲ್ಲ, ಅದು ಪಂಚಭೂತಗಳಿಂದ ಮಾಡಲ್ಪಟ್ಟು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಎಲ್ಲ ಮಾನವರಿಗೂ ಅದು ಸಮಾನವಾಗಿರುವುದರಿಂದ ದೇಹ ಬ್ರಾಹ್ಮಣ ಅಲ್ಲ. ಹಾಗಾದರೆ ಜಾತಿ ಬ್ರಾಹ್ಮಣವೆ? ಅಲ್ಲ,  ಏಕೆಂದರೆ ಅನೇಕ ಋಷಿಗಳು ಬೇರೆ ಬೇರೆ ಜಾತಿಯಿಂದ ಹುಟ್ತಿದವರಾಗಿದ್ದಾರೆ. ಋಷ್ಯಶೃಂಗನು ಜಿಂಕೆಯಿಂದ, ಕೌಶಿಕನು ಕುಶ (ಗರಿಕೆ) ಹುಲ್ಲಿನಿಂದ, ಜಂಬೂಕನು ನರಿಯಿಂದ ವಾಲ್ಮೀಕಿಯು ಹುತ್ತದಿಂದ, ವ್ಯಾಸನು ಮೀನುಗಾರನ ಮಗಳಿಂದ, ಗೌತಮನು ಮೊಲದಿಂದ ವಸಿಷ್ಠನು ಊರ್ವಶಿಯಿಂದ, ಅಗಸ್ತ್ಯನು ನೀರಿನ ಕುಂಭದಿಂದ ಹೀಗೆ ಅನೇಕ ಋಷಿಗಳು ಎಲ್ಲೆಲ್ಲೊ ಹೇಗೋ ಜನಿಸಿದರು. ಆದರೆ ಅವರು ತಮ್ಮ ಆಧ್ಯಾತ್ಮಿಕ ಸಾಧನೆಗಳಿಂದ ಮಹಾಜ್ಞಾನಿಗಳಾಗಿ ದಿವ್ಯೋಪದೇಶ ಮಾಡುವ ಸಂತರಾದರು. ಆದ್...

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು? ಏಕೆ?

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು?  ಏಕೆ? ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು. ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ| ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:|| ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ. ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು  ?  ಏಕೆ? ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇ...

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ ಅಂದರೆ .. ಎಂಜಲು, ಶಿವನ ನಿರ್ಮಾಲ್ಯ, ವಾಂತಿ, ಹೆಣದ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದ್ದು. ಈ ಐದು ಅತ್ಯಂತ ಪವಿತ್ರವಾದವುಗಳು...!! ಎಂದು . ೧. ಉಚ್ಚಿಷ್ಟಮ್ - ಎಂದರೆ ಎಂಜಲು . ಹಾಲು ಕರುವಿನ ಎಂಜಲು. ಹಸುವಿನ ಹಾಲನ್ನು ಕರು ಕುಡಿದು ಹಾಗೇ ಬಿಟ್ಟಿರುತ್ತದೆ . ಆ ಎಂಜಲು ಹಾಲನ್ನೇ ನಾವು ಉಪಯೋಗಿಸುತ್ತೇವೆ. ಕರುವಿನಿಂದ ಎಂಜಲಾದ ಹಾಲು ದೇವರಿಗೆ , ಪಂಚಾಮೃತಾಭಿಷೇಕಕ್ಕೆ ಬೇಕಾದ ಅತ್ಯಂತ ಪವಿತ್ರ ವಸ್ತು. ೨. ಶಿವನಿರ್ಮಾಲ್ಯಮ್ - ಎಂದರೆ ಶಿವನ ಜಟೆಯಿಂದ ಹೊರಗೆ ಬಂದ ಗಂಗೆ . ಗಂಗಾ ನದಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವಾಗ ಅಹಂಕಾರದಿಂದ ಬರುತ್ತಿದ್ದಳು . ಆಗ ಗಂಗೆಯ ಗರ್ವವನ್ನು ದಮನ ಮಾಡುವುದಕ್ಕಾಗಿ ಪರಶಿವನು ಆ ಗಂಗೆಯನ್ನು ತನ್ನ ಜಟೆಯ ಮಧ್ಯೆ ಕಟ್ಟಿಹಾಕಿಬಿಟ್ಟ.  ಅನಂತರ ಆ ಜಟೆಯಿ೦ದ ಗಂಗಾನದಿಯನ್ನು ಹೊರಕೆ ಹಾಕಿದ.  ಶಿವನ ಜಟೆಯಲ್ಲಿದ್ದು ಅಲ್ಲಿಂದ ಮುಕ್ತಳಾದ್ದರಿಂದ ಗಂಗಾನದಿಯು ಶಿವನ ನಿರ್ಮಾಲ್ಯವಾಯಿತು.  ಆದರೂ ಈ ಗಂಗೆಯು ಪವಿತ್ರ. ೩. ವಮನಮ್ - ಎಂದರೆ ವಾಂತಿ . ಜೇನುತುಪ್ಪ . ಜೇನುಹುಳುಗಳು ಬೇರೆಬೇರೆಯ ಗಿಡಮರಗಳಿಂದ ಮಕರಂದವನ್ನು ಬಾಯಲ್ಲಿ ಹಿಡಿದು ತಂದು,  ಬಾಯಿಂದಲೇ ಆ ಮಕರಂದವನ್ನು ಗೂಡಿನಲ್ಲಿ ಇಟ್ಟಿರುತ್ತವೆ.  ಅದೇ ಜೇನು ತುಪ್ಪ.  ಇದು ಜೇನುಹುಳುಗಳ ವಮನ. ಆದರೆ ಜೇನು...

ನಾತ್ಯಂತಂ ಸರಲೈರ್ಭಾವ್ಯಂ ಗತ್ವಾ ಪಶ್ಯ ವನಸ‌್ಥಲೀಮ್ | ಛಿದ್ಯಂತೇ ಸರಲಾಸ್ತತ್ರ ಕುಬ್ಜಾಸ್ತಿಷ್ಠಂತಿ ಪಾದಪಾಃ ||

ನಾತ್ಯಂತಂ ಸರಲೈರ್ಭಾವ್ಯಂ  ಗತ್ವಾ ಪಶ್ಯ ವನಸ‌್ಥಲೀಮ್ | ಛಿದ್ಯಂತೇ ಸರಲಾಸ್ತತ್ರ  ಕುಬ್ಜಾಸ್ತಿಷ್ಠಂತಿ ಪಾದಪಾಃ || ತುಂಬಾ ಸರಳವಾಗಿ ನೇರವಾಗಿ ಇರಬಾರದು. ಇದರಿಂದ ಅಪಾಯ ಕಷ್ಟ ಸಂಕಟ ಅನುಭವಿಸುವ ಸಂದರ್ಭಗಳೇ ಹೆಚ್ಚು. ಒಮ್ಮೆ ಕಾಡಿಗೆ ಹೋಗಿ ನೋಡಿ. ಮೃದುವಾದ,ನೇರವಾದ, ಒಳ್ಳೆಯ ಮರಗಳನ್ನೆಲ್ಲ ಹೇಗೆ ನಿರ್ದಯೆಯಿಂದ ಕಡಿದು ಹಾಕಿರುತ್ತಾರೆ ? ಅದೇ ಅಂಕು ಡೊಂಕು ವಕ್ರ ಮರಗಳು ರಾಜಾರೋಷವಾಗಿ ಬೆಳದು ತಲೆ ಎತ್ತಿ ನಿಂತಿರುತ್ತವೆ. ಒಳ್ಳೆಯವರಿಗೆ ಸತ್ಕಾಲ ಕಡಿಮೆ. ಕಳೆ ಬೆಳೆದಂತೆ, ಬೆಳೆ ಬೆಳೆಯುವುದಿಲ್ಲ.       ( ಚಾಣಕ್ಯ ನೀತಿಯಿಂದ )

ಬದುಕಿನಲ್ಲಿ ಏನನ್ನು ಮಾಡಬೇಕು , ಏನನ್ನು ಮಾಡಬಾರದು?

ಶ್ರೀ ಗುರು  ಶಂಕರ ಭಗವತ್ಪಾದರಿಂದ ರಚಿತವಾದ ಪ್ರಶ್ನೋತ್ತರಮಾಲಿಕಾ , ಬದುಕಿನಲ್ಲಿ ಏನನ್ನು ಮಾಡಬೇಕು , ಏನನ್ನು ಮಾಡಬಾರದೆಂದು ಬಹಳ ಸುಂದರ , ಸರಳವಾಗಿ ತಿಳಿಸುತ್ತದೆ.. ಈ ಲೇಖನವನ್ನು ತಪ್ಪದೇ ಓದಿ.. ಪ್ರಶ್ನೆ- ಭಗವನ್ ಕಿಮ್ ಉಪಾದೇಯಮ್..? ಪೂಜ್ಯರೇ ಜೀವನದಲ್ಲಿ ಏನನ್ನು ಅನುಸರಿಸಬೇಕು ? ಉತ್ತರ - ಗುರುವಚನಮ್ ಜೀವನದಲ್ಲಿ ಗುರು-ಹಿರಿಯರ ಮಾತನ್ನು ಅನುಸರಿಸಬೇಕು. ಪ್ರಶ್ನೆ - ಕಃ ಪಥ್ಯತರಃ ? ಪ್ರಪಂಚದಲ್ಲಿ ಹಿತಕರವಾದದ್ದು ಯಾವುದು ? ಉತ್ತರ - ಧರ್ಮಃ ಧರ್ಮವೇ ಹಿತಕರವಾದದ್ದು. ಪ್ರಶ್ನೆ - ಕಿಮ್ ವಿಷಮ್ ? ಯಾವುದು ವಿಷ ? ಉತ್ತರ - ಅವಧೀರಣಾ ಗುರುಷು ಗುರು-ಹಿರಿಯರಿಗೆ ಮಾಡಿದ ಅವಮಾನ,ಅಗೌರವವೇ ವಿಷ. ಪ್ರಶ್ನೆ - ಕಿಮ್ ಮನುಜೇಷು ಇಷ್ಟತಮಮ್ ? ಮನುಷ್ಯರಲ್ಲಿ ಇರಲೇಬೇಕಾದ ಶ್ರೇಷ್ಠ ಗುಣ ಯಾವುದು ? ಉತ್ತರ - ಸ್ವಪರಹಿತಾಯ ಉದ್ಯತಂ ಜನ್ಮ ಯಾವಾಗಲೂ ತನ್ನ ಮತ್ತು ಇತರರ ಸುಖಕ್ಕಾಗಿ ಜೀವನವನ್ನು ತೊಡಗಿಸಿಕೊಳ್ಳುವುದು. ಪ್ರಶ್ನೆ - ಕೇ ಚ ದಸ್ಯವಃ ? ಕಳ್ಳರು ಯಾರು ? ಉತ್ತರ - ವಿಷಯಾಃ ಸುಖಪಭೋಗ ವಸ್ತುಗಳೇ ಕಳ್ಳರು (ಅವು ಇಂದ್ರಿಯಗಳ ಮೂಲಕ ಮನಸನ್ನು ಅಪಹರಿಸುತ್ತವೆ ) ಪ್ರಶ್ನೆ - ಕೋ ವೈರೀ ? ನಮ್ಮ ಶತ್ರು ಯಾರು ? ಉತ್ತರ - ಯಸ್ತು ಅನುದ್ಯೋಗಃ ನಿರುದ್ಯೋಗವೇ ನಮ್ಮ ಶತ್ರು. ಪ್ರಶ್ನೆ - ಕಿಮ್ ಗುರುತಾಯಾಂ ಮೂಲಮ್ ? ಶ್ರೇಷ್ಠತೆಯ ಮೂಲ ಯಾವುದು ? ಉತ್ತರ - ಯತ್ ಏತ...

ಶ್ರೀ ಷೋಡಶೀ ಮಹಾತ್ಮೆ

ಶ್ರೀ ಷೋಡಶೀ ಮಹಾತ್ಮೆ (ದಶಮಹಾವಿದ್ಯೆಯ ಮೂರನೇ ಸಾಧನೆ ) ಜಗತ್ ಸೃಷ್ಟಿ ಕಾಲದಲ್ಲಿ ಲೋಕವೆಲ್ಲವೂ ಕತ್ತಲಲ್ಲಿ ಮುಳುಗಿತ್ತು ಸ್ಥಾವರ ಜಂಗಮಾದಿಗಳು ಮಾನವರು ಕತ್ತಲಲ್ಲಿ ದಿಕ್ಕು ಕಾಣದ ಚೈತನ್ಯ ಹೀನರಾಗಿ ನಿಶ್ಯಕ್ತಿಯನ್ನು ಹೊಂದಿದ್ದರು. ಆಗ ರಾಕ್ಷಸರು ಅನೇಕ ವಿಧದಲ್ಲಿ ಹುಟ್ಟಿ ಲೋಕವನ್ನು ನಾಶಮಾಡುತ್ತಾ ದುಸ್ಥಿತಿಗೆ ತರುತ್ತಿದ್ದರು. ಲೋಕದಲ್ಲಿ ಅನ್ಯಾಯ ಅಧರ್ಮ ಅಜ್ಞಾನ  ಅನೀತಿಗಳು ಹೆಚ್ಚಾಗಿದ್ದು ದೈವಿಕ ಕಾರ್ಯಗಳಿಗೆ ವಿರೋಧವಾಗಿ ಯಜ್ಞಯಾಗಾದಿಗಳಿಗೆ ಭಂಗ ಉಂಟಾಗಿ ರಾಕ್ಷಸರ ಬಾಧೆಯು ವಿಪರೀತವಾಗಿ ಬೆಳೆಯಿತು ದೇವತೆಗಳು ತಮ್ಮ ತಮ್ಮ ಕರ್ಮಗಳನ್ನು ನಿರ್ವಹಿಸಲು ಸಾಧ್ಯವಾಗದೇ ಹೋಯಿತು ಆಗ ಋಷಿಗಳು ದೇವತೆಗಳೆಲ್ಲರೂ ನಾರಾಯಣನನ್ನು ಅನುಸರಿಸಿಕೊಂಡು ಒಂದು ಮಹಾಯಾಗವನ್ನು ಮಾಡಿದರು ಆ ಯಾಗದಿಂದ ದೈತ್ಯಾಕಾರ ವಾದ ಶಕ್ತಿಯೊಂದು ಉದ್ಭವಿಸಿ ನೋಡಲು ವಿಕಾರವಾಗಿ ಭಯಂಕರವಾಗಿ ಕಂಡಿತು ಲೋಕ ಕ್ಷೇಮಕ್ಕಾಗಿ ಮಾಡಿದ ಯಾಗದಲ್ಲಿ ಹುಟ್ಟಿದ ಆ ಶಕ್ತಿಯು ಲೋಕವನ್ನೇ ನಾಶಮಾಡಲು ಹೊರಟಿತು ದೇವತೆಗಳನ್ನು ಹಿಂಸಿಸಿತು ಋಷಿಗಳಿಗೆ ದುಃಖ ಕೊಟ್ಟು ಸೃಷ್ಟಿಯಲ್ಲಿ ಇರುವುದನ್ನು ನಾಶಮಾಡಿ ಅಟ್ಟಹಾಸದಿಂದ ಇದರಿಂದ ಭಯಭೀತರಾಗಿ ಎಲ್ಲರೂ ಬ್ರಹ್ಮನನ್ನು ಕುರಿತು ಪ್ರಾರ್ಥಿಸಿದರು. ಸೃಷ್ಟಿಯಲ್ಲಿ ತಲ್ಲೀನನಾಗಿದ್ದ ಬ್ರಹ್ಮನು ಮುನಿಗಳ ಪ್ರಾರ್ಥನೆಯನ್ನು ಮನ್ನಿಸಿ ಅವರು ಬಂದ ಕಾರಣವನ್ನು ಕೇಳಿ ಅವರಿಗೆ ಅಭಯ ನೀಡುವ ಸಲುವಾಗಿ ಒಂದು ಮಹಾಸಭೆಯನ್ನು ನಡೆಸಿದನು ಆಗ ದೇವತೆಗಳು ...

ಶ್ರೀ ತಾರಾ ಮಹಾತ್ಮೆ

ಶ್ರೀ ತಾರಾ ಮಹಾತ್ಮೆ( ದಶಮಹಾವಿದ್ಯೆಯ ಎರಡನೆಯ ಸಾಧನೆ ) ಹಿಂದೆ ಪ್ರಹಲ್ಲಾದ  ವಂಶದವರಾದ ರಾಕ್ಷಸ  ಸುರರಲ್ಲಿ ತುಮುಲಾ ಸುರ ಒಬ್ಬನು. ಈತನು ದೈವ ಭಕ್ತನಾಗಿದ್ದನು ಆಗ ನಾರದರು ಬಂದು ರಾಕ್ಷಸನನ್ನು ಕುರಿತು ನೀನು ಅಪರಮಿತ ಮೇಧಾವಿ ಆಗಿರುವೆ ಆದರೆ ನಿನಗೆ ವಾಕ್ ಸಿದ್ದಿಯಿಲ್ಲ . ಆದ್ದರಿಂದ ನೀನು ನಿಮ್ಮ ಗುರುಗಳಾದ ಶುಕ್ರಾಚಾರ್ಯರಲ್ಲಿ ಹೋಗಿ ಸರಸ್ವತಿ ಅನುಗ್ರಹ ಬರುವಂತೆ ಆಶೀರ್ವದಿಸಿ ಮಂತ್ರೋಪದೇಶ ಮಾಡೆಂದು ಹೇಳಿ ಅವರಿಂದ ಪಡೆದರೆ ನಿನಗೆ ಒಳ್ಳೆಯ ಭವಿಷ್ಯ ಇದೆ ಎಂದು ಹೇಳಿ ಹೊರಟು ಹೋದರು. ರಾಜನ ಅನೇಕ ದಿನಗಳ ಕಾಲ ಯೋಚಿಸಿ ಕಡೆಗೆ ಒಂದು ದಿನ ಗುರುಗಳಲ್ಲಿ ಬಂದು ದೀನನಾಗಿ ನಮಸ್ಕರಿಸಿದನು. ಗುರುಗಳು ಅನುಗ್ರಹಿಸಿ ರಾಜನನ್ನು ಕುರಿತು ನಿನ್ನ  ಮನೊಸಿದ್ದಿ ಏನಿದೆ  ಎಂದರು. ಆಗ ರಾಜನು ತಾನು ಮಾತಿನಲ್ಲಿ ಎಲ್ಲರನ್ನೂ ಗೆಲ್ಲಬೇಕು ಅದಕ್ಕೆ ಸರಸ್ವತಿ ಮಂತ್ರೋಪದೇಶ ಮಾಡಿರಿ ಎಂದು ಪ್ರಾರ್ಥಿಸಿದನು ಗುರುಗಳು ಇವನ  ಮನೊ ಇಚ್ಛೆಯನ್ನು ನಾರದರೆ  ಹೇಳಿರಬೇಕೆಂದು ದಿವ್ಯದೃಷ್ಟಿಯಿಂದ ತಿಳಿದುಕೊಂಡು ರಾಜನೆ ಆ ಮಂತ್ರೋಪದೇಶ ದಿಂದ ನಿನಗೆ ನೀನೇ ಮೃತ್ಯುವಾಗುವೆ ಆದುದರಿಂದ ಅದು ಬೇಡ ಎಂದು ಪದೇ ಪದೇ ಹೇಳಿದರು. ರಾಜನು ಯಾವುದಕ್ಕೂ ಒಪ್ಪದೇ ಹೋಗಿ ಗುರುಗಳನ್ನು ಬಹಳವಾಗಿ ಪೀಡಿಸಿದನು. ಅವನ ಕರ್ಮಕ್ಕೆ ಬೇರೆ ದಾರಿ ಕಾಣದ ಗುರುಗಳು ಸುಮುಹೂರ್ತದಲ್ಲಿ ಆತನಿಗೆ ಉಪದೇಶ ಮಾಡಿದರು. ರಾಜನೇ ತಾಯಿಯು ಪ್ರತ್ಯಕ್ಷವಾದಾಗ ನ...

ಶ್ರೀ ದಕ್ಷಿಣ ಕಾಳಿ ಮಹಾತ್ಮೆ

ಶ್ರೀ ದಕ್ಷಿಣ ಕಾಳಿ ಮಹಾತ್ಮೆ( ದಶಮಹಾ ವಿದ್ಯೆಯ ಮೊದಲ ಸಾಧನೆ) ದೇವಾದಿ ದೇವತೆಗಳೆಲ್ಲರೂ ಸೇರಿ ಕೈಲಾಸದಲ್ಲಿ ಪಾರ್ವತಿ ಪರಮೇಶ್ವರರನ್ನು ಸ್ತುತಿಸುತ್ತಿದ್ದರು. ತುಂಬುರು ನಾರದರು ವೀಣೆಯನ್ನು ನುಡಿಸುತ್ತಾ  ನಂದಿಯು ಮೃದಂಗ ವಾದ್ಯ ನುಡಿಸಿ ತಿಲೊತ ಮಾದಿಗಳು ನರ್ತನ ಮಾಡುತ್ತಾ ಸನಕಾದಿ ಋಷಿಗಳು ವೇದ ಮಂತ್ರ ಪಾರಾಯಣ ಮಾಡುತ್ತಾ ರಾಕ್ಷಸರು ಪರಶಿವನ ಮಂತ್ರವನ್ನು ಜಪಿಸುತ್ತ ಅಷ್ಟದಿಕ್ಪಾಲಕರು ಸ್ವಾಮಿಯ ಸೇವೆಯನ್ನು ಯಥೋಚಿತವಾಗಿ ಮಾಡುತ್ತಾ ಬೃಂಗಿ ರಿಟಾಧಿಗಳು ಸುಶ್ರಾವ್ಯವಾಗಿ ಸಾಮಗಾನ ಮಾಡುತ್ತಿದ್ದರು . ಅಂತಹ ವಿಜ್ರಂಭನೆ ನಡೆಯುತ್ತಿರುವಾಗ ಭೂಲೋಕದಿಂದ ಬಂದ ನಾರದರು ಕೈಲಾಸದಲ್ಲಿ ಶಿವನನ್ನು ಕಂಡು ವಂದಿಸಿದರು. ಶಿವನು ಅವರಿಗೆ ಅಘ್ಯಾದಿಗಳನ್ನು ಕೊಟ್ಟು ಆಸನದಲ್ಲಿ ಕೂರಿಸಿ ಸತ್ಕರಿಸಿದನು ಸಂತುಷ್ಟರಾದ ನಾರದರು ಪರಶಿವನನ್ನು ಕೊಂಡಾಡಿದರು ಅವರು ಸ್ವಲ್ಪ ಅಸಮಾಧಾನ ತೋರಿದ್ಂತಿದ್ದರು . ಆಗ ಶಿವನು ನಾರದನನ್ನು ಕುರಿತು ಬ್ರಹ್ಮರ್ಷಿಗಳೆ ತಾವು ಈ ರೀತಿ ಅಸಮಾಧಾನ ಪಟ್ಟಿರುವುದಕ್ಕೆ ಕಾರಣವೇನು ಎಂದು ಒತ್ತಾಯಿಸಿ ಕೇಳಿದನು. ಆಗ ನಾರದರು ಸ್ವಲ್ಪ ತಲೆ ಬಗ್ಗಿಸಿ ದೇವ ದೇವ ಪ್ರಪಂಚದಲ್ಲೆಲ್ಲಾ ಇನ್ನ ಕೀರ್ತಿ ಭಜನೆ ಆರಾಧನೆಗಳು ವಿಶೇಷವಾಗಿ ನಡೆಯುತ್ತಿದೆ ನಾನು ಕೂಡ ಅದನ್ನು ನೋಡಿ ತೃಪ್ತಿ ಪಟ್ಟೆನು. ಅಂತಹ ಸಮಯದಲ್ಲಿ ನಿಮ್ಮನ್ನೇ ದಿಕ್ಕರಿಸಿದ ಒಂದು ಅವಕಾಶವನ್ನು ನಾನು ನೋಡಿ ಬಂದೆನು ಎಂದು ಹೇಳಿ ತಲೆ ತಗ್ಗಿಸಿದರು. ಶಿವನು ಬಲತ್ಕಾರವಾಗಿ ನ...