Skip to main content

ಶ್ರೀ ಷೋಡಶೀ ಮಹಾತ್ಮೆ

ಶ್ರೀ ಷೋಡಶೀ ಮಹಾತ್ಮೆ (ದಶಮಹಾವಿದ್ಯೆಯ ಮೂರನೇ ಸಾಧನೆ )

ಜಗತ್ ಸೃಷ್ಟಿ ಕಾಲದಲ್ಲಿ ಲೋಕವೆಲ್ಲವೂ ಕತ್ತಲಲ್ಲಿ ಮುಳುಗಿತ್ತು ಸ್ಥಾವರ ಜಂಗಮಾದಿಗಳು ಮಾನವರು ಕತ್ತಲಲ್ಲಿ ದಿಕ್ಕು ಕಾಣದ ಚೈತನ್ಯ ಹೀನರಾಗಿ ನಿಶ್ಯಕ್ತಿಯನ್ನು ಹೊಂದಿದ್ದರು. ಆಗ ರಾಕ್ಷಸರು ಅನೇಕ ವಿಧದಲ್ಲಿ ಹುಟ್ಟಿ ಲೋಕವನ್ನು ನಾಶಮಾಡುತ್ತಾ ದುಸ್ಥಿತಿಗೆ ತರುತ್ತಿದ್ದರು. ಲೋಕದಲ್ಲಿ ಅನ್ಯಾಯ ಅಧರ್ಮ ಅಜ್ಞಾನ  ಅನೀತಿಗಳು ಹೆಚ್ಚಾಗಿದ್ದು ದೈವಿಕ ಕಾರ್ಯಗಳಿಗೆ ವಿರೋಧವಾಗಿ ಯಜ್ಞಯಾಗಾದಿಗಳಿಗೆ ಭಂಗ ಉಂಟಾಗಿ ರಾಕ್ಷಸರ ಬಾಧೆಯು ವಿಪರೀತವಾಗಿ ಬೆಳೆಯಿತು ದೇವತೆಗಳು ತಮ್ಮ ತಮ್ಮ ಕರ್ಮಗಳನ್ನು ನಿರ್ವಹಿಸಲು ಸಾಧ್ಯವಾಗದೇ ಹೋಯಿತು ಆಗ ಋಷಿಗಳು ದೇವತೆಗಳೆಲ್ಲರೂ ನಾರಾಯಣನನ್ನು ಅನುಸರಿಸಿಕೊಂಡು ಒಂದು ಮಹಾಯಾಗವನ್ನು ಮಾಡಿದರು ಆ ಯಾಗದಿಂದ ದೈತ್ಯಾಕಾರ ವಾದ ಶಕ್ತಿಯೊಂದು ಉದ್ಭವಿಸಿ ನೋಡಲು ವಿಕಾರವಾಗಿ ಭಯಂಕರವಾಗಿ ಕಂಡಿತು ಲೋಕ ಕ್ಷೇಮಕ್ಕಾಗಿ ಮಾಡಿದ ಯಾಗದಲ್ಲಿ ಹುಟ್ಟಿದ ಆ ಶಕ್ತಿಯು ಲೋಕವನ್ನೇ ನಾಶಮಾಡಲು ಹೊರಟಿತು ದೇವತೆಗಳನ್ನು ಹಿಂಸಿಸಿತು ಋಷಿಗಳಿಗೆ ದುಃಖ ಕೊಟ್ಟು ಸೃಷ್ಟಿಯಲ್ಲಿ ಇರುವುದನ್ನು ನಾಶಮಾಡಿ ಅಟ್ಟಹಾಸದಿಂದ ಇದರಿಂದ ಭಯಭೀತರಾಗಿ ಎಲ್ಲರೂ ಬ್ರಹ್ಮನನ್ನು ಕುರಿತು ಪ್ರಾರ್ಥಿಸಿದರು.

ಸೃಷ್ಟಿಯಲ್ಲಿ ತಲ್ಲೀನನಾಗಿದ್ದ ಬ್ರಹ್ಮನು ಮುನಿಗಳ ಪ್ರಾರ್ಥನೆಯನ್ನು ಮನ್ನಿಸಿ ಅವರು ಬಂದ ಕಾರಣವನ್ನು ಕೇಳಿ ಅವರಿಗೆ ಅಭಯ ನೀಡುವ ಸಲುವಾಗಿ ಒಂದು ಮಹಾಸಭೆಯನ್ನು ನಡೆಸಿದನು ಆಗ ದೇವತೆಗಳು ಆರ್ತನಾದ ಆಲಿಸಿದ ಬ್ರಹ್ಮನು ಎಲ್ಲರೊಡಗೂಡಿ ಶ್ರೀ ಚಕ್ರ ದೇವತೆಯನ್ನು ಕುರಿತು ಪೂಜೆಯನ್ನು ಅನೇಕ ವರ್ಷಗಳ ಕಾಲ ಮಾಡುತ್ತಿದ್ದರು. ಹೀಗೆ ಪೂಜೆ ನಡೆದ ಮೇಲೆ ತಾಯಿಯು ಜ್ಯೋತಿ ರೂಪದಲ್ಲಿ ಕಾಣಿಸಿಕೊಂಡು ತನ್ನನ್ನು ಪೂಜೆಮಾಡಿದ ಕಾರಣವೇನೆಂದು ಕೇಳಿದಳು. ಆಗ ಬ್ರಹ್ಮಾದಿಗಳು ತಾಯಿಯನ್ನು ಆರಾಧಿಸಿ ತಮಗೆ ಬಂದಿರುವ ಸೃಷ್ಟಿ ವಿನಾಶದ ಪರಿಸ್ಥಿತಿಯನ್ನು ವಿವರಿಸಿದರು. ತಾಯಿಯು ಎಲ್ಲವನ್ನೂ ಕೇಳಿ ನೀವೆಲ್ಲರೂ ಕಶ್ಯಪ ಋಷಿಗಳನ್ನು ಮುಂದಿಟ್ಟುಕೊಂಡು ಶ್ರೀ ಚಕ್ರ ಹೋಮವನ್ನು ಮಾಡಿರಿ ಅಲ್ಲಿ ನಾನು ಅವತಾರವೆತ್ತಿ ಇದಕ್ಕೆ ಪರಿಹಾರ ನೀಡುವೆ ಎಂದು ಹೇಳಿ ಅಂತರ್ಧಾನಳಾದಳು ಅನಂತರ ಎಲ್ಲರೂ ಕಶ್ಯಪ ರನ್ನು ಕುರಿತು ಅವರ ಆಶ್ರಮಕ್ಕೆ ಪ್ರಯಾಣ ಮಾಡಿದರು. ಅಲ್ಲಿ ಕಶ್ಯಪರು ಯೋಗ ನಿದ್ರೆಯಲ್ಲಿದ್ದರು ಅವರು ಯೋಗನಿದ್ರೆಯಿಂದ ವಿಮುಖವಾಗುವ ವರೆಗೂ ಅಲ್ಲಿಯೇ ಇದ್ದು ಸದಾ ಅವರನ್ನೇ ಹಾಡಿ ಹೊಗಳುತ್ತಿದ್ದರು.

ಕಶ್ಯಪರು ಅ ಚಿರಕಾಲದಲ್ಲಿಯೇ ಯೋಗದಿಂದ ವಿಮುಖರಾಗಿ ಎದುರಿಗಿದ್ದ ಬ್ರಹ್ಮಾದಿ ದೇವತೆಗಳನ್ನು ನಾರದಾದಿ ಮುನಿಪುಂಗವರನ್ನು ಕಂಡು ಕುಶಲಪ್ರಶ್ನೆ ಮಾಡಿ ಅರ್ಘ್ಯಾದಿಗಳಿಂದ ಸತ್ಕರಿಸಿದರು ಆಗ ಬ್ರಹ್ಮನು ಲೋಕ ಕ್ಷೇಮಕ್ಕಾಗಿ ಮಾಡಿದ ಯಾಗದಲ್ಲಿ ಯಾವುದೋ ಅಂಧಕಾರ ದೇವತೆಯು ಹುಟ್ಟಿ ರಕ್ಷಣೆಗೆ ಬದಲಾಗಿ ಲೋಕ ನಾಶ ವನ್ನೇ ಮಾಡುತ್ತಿದೆ ಇದಕ್ಕೆ ಕಾರಣವೇನು ಇದಕ್ಕೆ ಪರಿಹಾರವೇನು ಎನ್ನಲು ಕಶ್ಯಪರು ತಮ್ಮ ದಿವ್ಯ ದೃಷ್ಟಿಯಿಂದ ನೋಡಿಕೊಂಡು ನೀವು ಯಾಗವನ್ನು ತಮಸ್ಸಿನಲ್ಲಿ ಮಾಡಿದ ಕಾರಣ ತಮೋಗ್ರಹಶಕ್ತಿ ಉತ್ಪತ್ತಿಯಾಗಿದೆ. ಅದು ಮಹಾಬಲಶಾಲಿಯಾಗಿದೆ. ಅದಕ್ಕೆ ತಮೊಗುಣವೇ ಪ್ರಧಾನವಾಗಿದೆ. ಆದ್ದರಿಂದ ಆ ಶಕ್ತಿಯು ಲೋಕ ಕಂಟಕವಾಗಿದ್ದು ನಿಮಗೂ ಕೂಡ ಭಯ ಬೀದಿಗಳನ್ನು ತರಿಸುತ್ತಿದೆ ಅದನ್ನು ಉಪಶಮನ ಮಾಡಬೇಕಾದರೆ ತ್ರಿಗುಣೊನ್ವಿತವಾದ ಶಕ್ತಿ ಬೇಕು. ಆ ಶಕ್ತಿಯು ಶ್ರೀ ಚಕ್ರದಿಂದ ಉದಯಿಸಬೇಕೆ ವಿನಹ ಅನ್ಯ ರೀತಿಯಲ್ಲಿ ಸಾಧ್ಯವಾಗಲಾರದು ಅಂತಹ ಶಕ್ತಿ ನನಗಿಲ್ಲ ಎಂದು ಹೇಳಿದರು. ಇಷ್ಟು ಮಾತಿಗೆ ಒಪ್ಪದ ವಿಷ್ಣುವು ಮುನಿಗಳೇ ನೀವೇ ಅದನ್ನು ಪಡೆಯಲು ಅರ್ಹರು ಏಕೆಂದರೆ ಪ್ರಜಾ ಸೃಷ್ಟಿಯಲ್ಲಿ ನಿಮ್ಮದೇ ಸಿಂಹಪಾಲು ಆದ ಕಾರಣ ನೀವು ಮನಸ್ಸು ಮಾಡಿ ಈ ಕಾರ್ಯಕ್ಕೆ ಭಾಗಿಯಾಗಬೇಕೆಂದು ವಿಧವಿಧವಾಗಿ ಬೇಡಿಕೊಂಡರು.

ಅಷ್ಟರಲ್ಲಿ ಕಾಶ್ಯಪರು ದೇವತೆಗಳನ್ನು ಕುರಿತು ನಾನು ಸಂತಾನವಿಲ್ಲದ ವನ್ನು ಯಾಗ ಮಾಡುವುದರಿಂದ ಫಲ ದೊರಕಲಾರದೆಂದು ಹೇಳಿದರು ಆಗ ಬ್ರಹ್ಮನು ಋಷಿಗಳೇ ನೀವು ಸಂತಾನಾರ್ಥಿಯಾಗಿ ಯಾಗ ಮಾಡಿರಿ ಅದಕ್ಕೆ ನಾವೆಲ್ಲರೂ ನಿಮಗೆ ಸಹಾಯಕರಾಗಿರುವೆವು ಎಂದು ಹೇಳಿದರು ಕಶ್ಯಪರು ಕ್ಷಣಕಾಲ ಯೋಚಿಸಿ ಒಪ್ಪಿಕೊಂಡರು ಆದರೆ ಕತ್ತಲಲ್ಲಿ ಮಾಡಿದ ಹೋಮ ತಮೋಗುಣವೇ ಹೊರತು ಪ್ರಕಾಶವಾಗಲಾರದೆಂದು ಯೋಚಿಸ್ತಿದ್ದಾಗ ಪತ್ನಿಯಾದ ಅದಿತಿಯು ಬಂದು ತನ್ನ ಮಾಂಗಲ್ಯದಲ್ಲಿದ್ದ ಪ್ರಕಾಶವನ್ನು ಜ್ಯೋತಿ ರೂಪದಲ್ಲಿ ಬೆಳಕು ಮಾಡಲು ಶ್ರೀಚಕ್ರವನ್ನು ಆರಾಧಿಸಿದಳು. ಕಾಲಕ್ರಮೇಣ ತಾಯಿಯು ಅನುಗ್ರಹದಿಂದ ಮಾಂಗಲ್ಯವೆ ಜ್ಯೋತಿಯಾಗಿ ಪ್ರಕಾಶಮಾನವಾದ ಬೆಳಕನ್ನು ತಂದಿತ್ತು. ಇದನ್ನು ಅರಿತ ತಮಸ್ಸು ಎಂಬ ರಾಕ್ಷಸ ಶಕ್ತಿಯು ದೀಪವನ್ನು ನಂದಿಸಲು ಅನೇಕ ಮಾಯಾ ವಿದ್ಯೆಗಳನ್ನು ಪ್ರದರ್ಶಿಸಿತು ಶಕ್ತಿಮೀರಿ ಹೋರಾಡಿತು ಆದರೆ ಆ ದೀಪ ನಂದಲಿಲ್ಲ. ದೀಪದ ಪ್ರಕಾಶ ಹೆಚ್ಚಿದಂತೆಲ್ಲಾ ತಮಸ್ಸಿನ ಶಕ್ತಿ ಕುಂದುತ್ತಾ ಬಂದಿತು ಅದನ್ನು ಕಂಡು ದೇವತೆಗಳೆಲ್ಲರೂ ಸಂತೋಷಪಟ್ಟು ಹಾಡಿಹೊಗಳಿ ಆನಂದಪಟ್ಟರು ಬೆಳಕಿನಲ್ಲಿ ಕಶ್ಯಪರು ಶ್ರೀಚಕ್ರ ಹೋಮವನ್ನು ಷೋಡಶೀ ರೂಪದಲ್ಲಿ ಮಾಡಿದರು.

ಹೋಮವೂ ದಿನೇದಿನೇ ವಿಜ್ರಂಭಣೆಯಿಂದ ಕೂಡಿ ಪ್ರಕಾಶಮಾನವಾದ ರೀತಿಯಲ್ಲಿ ನಡೆಯಿತು ಆಗ ಜ್ಯೋತಿಯು ಕಶ್ಯಪನ ದಂಪತಿಗಳಿಗೆ ಆಶೀರ್ವದಿಸಿ ಜ್ಯೋತಿಯಾಗಿ ಅದಿತಿ ಗರ್ಭ ಸೇರಿತು. ದೇವತೆಗಳು ಸಂತೋಷಪಟ್ಟು ದೇವಿಗೆ ನಮಸ್ಕರಿಸಿ ದಂಪತಿಗಳಿಗೆ ವಂದಿಸಿ ತಮ್ಮ ತಮ್ಮ ಸ್ವಸ್ಥಾನಕ್ಕೆ ಹೋದರು ಇತ್ತ ಅದಿತಿ ಗರ್ಭದಲ್ಲಿ ಪಿಂಡವು ಬೆಳೆಯುತ್ತಿರುವಾಗ ತಮಸ್ಸು ಅದನ್ನು ನಾಶಮಾಡಲು ತನ್ನ ಭಯಂಕರವಾದ ಆಯುಧದಿಂದ ಹೊಡೆಯಿತು. ಆದರೆ ಆ ಪಿಂಡಕ್ಕೆ ಹೊಡೆತ ತಗುಲದೆ ಆ ಆಯುಧದಿಂದಲೆ ಅನೇಕ ಕಿರಣಗಳು ದಿಕ್ಕುಪಾಲಾಗಿ ಚದುರಿ ಆ ಪಿಂಡದ ಸುತ್ತಲೂ ನಿಂತಿತು. ಇದನ್ನು ಕಂಡ ತಮಸ್ಸು ಗರ್ಭ ಪಿಂಡ ಬಲಿಯುತ್ತಿರುವುದನ್ನು ನೋಡಿ ಪಿಂಡಕ್ಕೆ ಅಂಗಾಂಗಗಳು ಬೆಳೆಯದಂತೆ ತಡೆಯಿತು. ಆದರೆ ದಿವ್ಯ ಶಕ್ತಿಯ ಮುಂದೆ ಏನೂ ನಡೆಯಲಿಲ್ಲ ಹೀಗೆ ಮಗು ಜನನವಾಗುವವರೆಗೂ ಹೋರಾಡಿತು. ಆದರೆ ಮಾಂಗಲ್ಯ ಶಕ್ತಿಯು ಪ್ರಭಾವದಿಂದ ಮಗು ಅಂಗಾಂಗಗಳ ಸಹಿತ ಚೆನ್ನಾಗಿ ಬೆಳೆಯಿತು ಸುಮುಹೂರ್ತದಲ್ಲಿ ಅದಿತಿಯು ಗಂಡು ಮಗುವನ್ನು ಪ್ರಸವಿಸಿದಳು.

ಅದನ್ನು ತಿಳಿದು ತಮಸ್ಸು ಮಗುವನ್ನು ನಾಶಮಾಡಲು ಬಂದಿತು ಆಗ ಮಗು ಚಕ್ರಾಕಾರವಾಗಿ ತಿರುಗುತ್ತಾ ಹದಿನಾಲ್ಕು ಲೋಕಗಳಲ್ಲೂ ಸುತ್ತುತ್ತಿತ್ತು. ಮಗುವಿನೊಂದಿಗೆ ಓಡುತ್ತಾ ಓಡುತ್ತಾ ತಮಸ್ಸು ಸುಸ್ತಾಗಿರುವ ಸಮಯ ನೋಡಿ ಆ ವರ್ತುಲಾಕಾರವಾಗಿದ್ದ ಮಗುವು ತನ್ನ ಪ್ರಕಾಶವಾದ ಕಿರಣಗಳಿಂದ ತಮಸ್ಸನ್ನು ಯುದ್ಧದಲ್ಲಿ ಸಂಹರಿಸಿತು. ತಮಸ್ಸು ಮತ್ತೆ ಹುಟ್ಟುವುದು ಅದನ್ನು ಮಗುವು ಸಂಹರಿಸುವ ಕ್ರಿಯೆಗಳು ಹಾಗೆಯೇ ಉಳಿದು ಹೋಯಿತು. ಆಗ ಕಶ್ಯಪ ದಂಪತಿಗಳು ಶ್ರೀ ಚಕ್ರ ತಾಯಿಯನ್ನು ಕುರಿತು ಪೂಜಿಸಿದರು. ಅಮ್ಮ ನಮಗೆ ಸಂತಾನವನ್ನು ನೀಡಿದೆ ಆದರೆ ಮಗು ಮುಖ ನೋಡುವಷ್ಟು ಭಾಗ್ಯವಿಲ್ಲದೆ ಕೇವಲ ಗುಂಡಾಗಿರುವ ಆಕಾರವನ್ನೇ ನೋಡುವಂತೆ ಮಾಡಿದೆ ನಾವು ಮಾಡಿದ ಪಾಪ ವಾದರೂ ಏನು ಹೆತ್ತವರಿಗೆ ಈ ದುಃಖ ಏತಕ್ಕೆ ನೀಡಿದೆ ತಾಯಿ ಎಂದು ಅನೇಕ ವಿಧದಲ್ಲಿ ದುಃಖದಿಂದ ಪ್ರಲಾಪಿಸಿದರು ಆಗ ದಯಾಮಯಳಾದ ತಾಯಿಯು ಪ್ರತ್ಯಕ್ಷವಾಗಿ ಬಂದು ದಂಪತಿಗಳಿಗೆ ಸಮಾಧಾನ ಮಾಡಿ ನೀವು ಕೋರಿದಾಗ ನಿಮ್ಮ ಮಗನು ಅಂಗಾಂಗಗಳ ಸಮೇತ ಕಾಣುವನು. ಉಳಿದಂತೆ ಆತನು ಚಕ್ರ ರೂಪದಲ್ಲಿ ತಮಸ್ಸನ್ನು ಸಂಹರಿಸುವ ಕ್ರಿಯೆಯಲ್ಲಿ ತೊಡಗುವನು. ಆತನ ಅಪಾರ ತೇಜಸ್ಸಿನಿಂದ ಕೂಡಿರುತ್ತಾನೆ ಆತನು ನಿತ್ಯ ಯವ್ವನವಂತನು ಎಂದು ಆಶೀರ್ವದಿಸಿದಳು.

ಆದ ಕಶ್ಯಪರು ಅಮ್ಮ ತಮಸ್ಸು ಎಂದಿಗೆ ನಾಶವಾಗುವ ನು ಅದನ್ನು ನಿಗ್ರಹಿಸಲು ಸಾಧ್ಯವಿಲ್ಲವೇ ಎಂದು ಕೇಳಿದರು ತಾಯಿಯು ದೇವತೆಗಳೆಲ್ಲರ ತೇಜಸ್ಸಿನಿಂದ ಬೆಳೆದುಬಂದ ಜ್ಯೋತಿಯು ರಾತ್ರಿ ಕಾಲದಲ್ಲಿ ಹೋಮ ಮಾಡಿದ ಫಲವಾಗಿ ಅದು ಅಸಾಧಾರಣವಾದುದ್ದು ಅದಕ್ಕೆ ಅಂತ್ಯ ಆದಿಗಳಿಲ್ಲ ಲೋಕದಲ್ಲಿ ಎಂದು ತಮಸ್ಸು ತನ್ನ ಚರ್ಯೆ ನಿಲ್ಲಿಸುವುದೊ ಅಂದೆ ಪ್ರಳಯ ವಾಗುವುದು. ಆದ್ದರಿಂದ ನೀವು ಕೂಡ ತಮಸ್ಸನ್ನು ಪೂಜಿಸಿರಿ ಲೋಕಕ್ಷೇಮವಾಗುವುದೆಂದು ಹೇಳಿ ಅಂತರ್ಧಾನ ವಾದಳು. ಇತ್ತ ತಮಸ್ಸು ನಾಶವಾದರೂ ಮತ್ತೆ ಹುಟ್ಟುವುದು ಹೀಗೆ ಸೃಷ್ಟಿ ಕ್ರಿಯೆ ನಡೆಯುತ್ತಿರುವುದು ಮಗಳು ಇರುಳು ಎಂಬ ಕಾಲಗಳು ಬೆಳಕಾಗಿ ಜ್ಯೋತಿ ರೂಪದಲ್ಲಿ ಪ್ರಜ್ವಲಿಸುತ್ತಿರುವವನೆ ಇಂದು ನಾವು ಕಾಣುತ್ತಿರುವ ಸೂರ್ಯ ದೇವರು. ತಾಯಿಯ ಮಾಂಗಲ್ಯದ ಬೆಳಕಿನಲ್ಲಿ ಉದಯಿಸಿದನಾದ್ದರಿಂದ ಅವನು ಮಾಂಗಲ್ಯ ರಕ್ಷಕನೂ ತಮಸ್ಸುನೋಡನೆ  ಹೋರಾಡಿ ಬೆಳಕನ್ನು ಕೊಡುವವನು. ಅವನ ತೇಜಸ್ಸು ಅಪಾರ ಅನಂತ. ಇಂತಹ ಷೋಡಶಿ ಯನ್ನು ನಾವು ಶ್ರೀಚಕ್ರದಲ್ಲಿ ಆರಾಧಿಸಿ ನಮ್ಮ ಶರೀರ ತೇಜಸ್ಸನ್ನು ಹೆಚ್ಚಿಸಿಕೊಳ್ಳಬಹುದು ಎಂದು ಭಾಗವತದಲ್ಲಿ ಉಲ್ಲೇಖ.
ಗುರು ರೂಪಿಣಿಯಾದ ಶ್ರೀ ಚಕ್ರ ಲಲಿತಾ ತ್ರಿಪುರ ಸುಂದರಿ ಎಲ್ಲರಿಗೂ ಶುಭವನ್ನು ಅನುಗ್ರಹಿಸಲಿ
ಧರ್ಮೋ ರಕ್ಷತಿ ರಕ್ಷಿತಃ
 ಲೋಕ ಸಮಸ್ತ ಸುಖಿನೋಭವಂತು

 ಕಿರಣ್ ಜಯರಾಮ ಆಚಾರ್ಯ
ಚಾರ್ಟರ್ಡ್ ಅಕೌಂಟೆಂಟ್



Comments

Post a Comment

Popular posts from this blog

ಶ್ರೀ ಚಕ್ರ ಮತ್ತು ಅದರ ಮಹಿಮೆ

ಶ್ರೀಚಕ್ರ ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಸೃಷ್ಟಿಯ ಜನನಿ ಶ್ರೀ ಲಲಿತೆಯ ಮೂರ್ತ ರೂಪದ ರೇಖಾಯಂತ್ರ. ಆದಿ ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ ಶಕ್ತಿದೇವಿಯ ಸಾತ್ವಿಕ ರೂಪವು ಉಗಮಿಸುವಂತೆ ಮಾಡಿದರು. ಕ್ರಮಬದ್ಧವಾಗಿ ರಚಿಸಿದ ಶ್ರೀಚಕ್ರದ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀಲಲಿತಾ ದೇವಿಯ ಚಿತ್ರ ಗೋಚರಿಸಿದ್ದು ದಾಖಲಾಗಿದೆ. ಜೊತೆಗೆ ಶಬ್ಧವನ್ನು ದೃಶ್ಯರೂಪವಾಘಿ ಪರಿವರ್ತಿಸುವ ವಿಜ್ಞಾನ ಶಬ್ಧ ಹಾಗೂ ಕಂಪನಗಳ ಪ್ರಭಾವದ ಅರಿವು ಮೂಡಿಸುತ್ತಿದೆ, ಶ್ರೀಚಕ್ರದ ಮೇಲೆ ಇಟ್ಟ ದೃಷ್ಟಿ ನರಮಂಡಲದಲ್ಲಿ ಉಂಟಾಗುವ ಕಂಪನ ಇಇಜಿಯಲ್ಲಿ (ಎಲೆಕ್ಟ್ರೋ ಎನ್ ಕೆಫಲೋಗ್ರಾಫ್) ಆಲ್ಫಾ ಅಲೆ ಹೊರಡಿಸುತ್ತದೆ. ಧ್ಯಾನ ಸ್ಥಿತಿಯಲ್ಲೂ ಈ ಅಲೆ ನಿಧಾನಗತಿಯಲ್ಲಿ ಹೊರಹೊಮ್ಮುತ್ತದೆ, ಯಾವುದೇ ಇತರ ಚಕ್ರ ವೀಕ್ಷಿಸಿದಾಗ ಇಇಜಿ ಅಲೆಗಳಲ್ಲಿ ಬದಲಾವಣೆ ಕಂಡುಬರುವುದಿಲ್ಲ, ಶಕ್ತಿಯುತ ಅಣು ಕ್ಷಣಗಳಿಂದಾದ ಅಲೆ ವಿದ್ಯುತ್ ಅಯಸ್ಕಾಂತ ಬಲಕಾರಕ ಶಕ್ತಿ ಸಮಾಗಮಕ್ಕೆ ನಾಂದಿ, ಶ್ರೀಚಕ್ರದ ಮೂಲಕ ದಿವ್ಯ ಮಂತ್ರೋಚ್ಚಾರಗಳಿಂದಾದ ಶಬ್ಧ ಬ್ರಹ್ಮ ಶಕ್ತಿ ಇದನ್ನು ಸಾಧಿಸುತ್ತದೆಂದು ಭಾವಿಸಬಹುದು, ಒಂದು ದೃಷ್ಟಿಯಲ್ಲಿ ಆದಿ ಶಂಕರಾಚಾರ್ಯರನ್ನು ಕಣ ಭೌತ ಶಾಸ್ತ್ರದ ಪಿತಾಮಹ ಎನ್ನಬಹುದು. ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನೇ ನಿಗ್ರಹಿಸಿದರು, ಶ್ರೀ ಸೌಂದ...

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ ಅಂದರೆ .. ಎಂಜಲು, ಶಿವನ ನಿರ್ಮಾಲ್ಯ, ವಾಂತಿ, ಹೆಣದ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದ್ದು. ಈ ಐದು ಅತ್ಯಂತ ಪವಿತ್ರವಾದವುಗಳು...!! ಎಂದು . ೧. ಉಚ್ಚಿಷ್ಟಮ್ - ಎಂದರೆ ಎಂಜಲು . ಹಾಲು ಕರುವಿನ ಎಂಜಲು. ಹಸುವಿನ ಹಾಲನ್ನು ಕರು ಕುಡಿದು ಹಾಗೇ ಬಿಟ್ಟಿರುತ್ತದೆ . ಆ ಎಂಜಲು ಹಾಲನ್ನೇ ನಾವು ಉಪಯೋಗಿಸುತ್ತೇವೆ. ಕರುವಿನಿಂದ ಎಂಜಲಾದ ಹಾಲು ದೇವರಿಗೆ , ಪಂಚಾಮೃತಾಭಿಷೇಕಕ್ಕೆ ಬೇಕಾದ ಅತ್ಯಂತ ಪವಿತ್ರ ವಸ್ತು. ೨. ಶಿವನಿರ್ಮಾಲ್ಯಮ್ - ಎಂದರೆ ಶಿವನ ಜಟೆಯಿಂದ ಹೊರಗೆ ಬಂದ ಗಂಗೆ . ಗಂಗಾ ನದಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವಾಗ ಅಹಂಕಾರದಿಂದ ಬರುತ್ತಿದ್ದಳು . ಆಗ ಗಂಗೆಯ ಗರ್ವವನ್ನು ದಮನ ಮಾಡುವುದಕ್ಕಾಗಿ ಪರಶಿವನು ಆ ಗಂಗೆಯನ್ನು ತನ್ನ ಜಟೆಯ ಮಧ್ಯೆ ಕಟ್ಟಿಹಾಕಿಬಿಟ್ಟ.  ಅನಂತರ ಆ ಜಟೆಯಿ೦ದ ಗಂಗಾನದಿಯನ್ನು ಹೊರಕೆ ಹಾಕಿದ.  ಶಿವನ ಜಟೆಯಲ್ಲಿದ್ದು ಅಲ್ಲಿಂದ ಮುಕ್ತಳಾದ್ದರಿಂದ ಗಂಗಾನದಿಯು ಶಿವನ ನಿರ್ಮಾಲ್ಯವಾಯಿತು.  ಆದರೂ ಈ ಗಂಗೆಯು ಪವಿತ್ರ. ೩. ವಮನಮ್ - ಎಂದರೆ ವಾಂತಿ . ಜೇನುತುಪ್ಪ . ಜೇನುಹುಳುಗಳು ಬೇರೆಬೇರೆಯ ಗಿಡಮರಗಳಿಂದ ಮಕರಂದವನ್ನು ಬಾಯಲ್ಲಿ ಹಿಡಿದು ತಂದು,  ಬಾಯಿಂದಲೇ ಆ ಮಕರಂದವನ್ನು ಗೂಡಿನಲ್ಲಿ ಇಟ್ಟಿರುತ್ತವೆ.  ಅದೇ ಜೇನು ತುಪ್ಪ.  ಇದು ಜೇನುಹುಳುಗಳ ವಮನ. ಆದರೆ ಜೇನು...

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು? ಏಕೆ?

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು?  ಏಕೆ? ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು. ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ| ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:|| ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ. ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು  ?  ಏಕೆ? ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇ...