Skip to main content

"ಸಾಧನೆ" ಎಂದರೆ ನಿನ್ನಿಂದ ಯಾರಿಗೂ ತೊಂದರೆಯಾಗದಂತೆ ಬದುಕುವುದು

ಒಮ್ಮೆ ಶಿಷ್ಯರೊಬ್ಬರು ಸದ್ಗುರುಗಳ ಬಳಿ ತಮಗೆ ಹೆಚ್ಚು ಸಮಯ ಧ್ಯಾನ, ಜಪಾದಿಗಳಿಗೆ ಕುಳಿತುಕೊಳ್ಳಲು ಆಗುತ್ತಿಲ್ಲ ಎಂದು ಹೇಳಿಕೊಂಡರು.

ಅದಕ್ಕೆ ಪ್ರತಿಯಾಗಿ ಸದ್ಗುರುಗಳು ಹೀಗೆ ನುಡಿದರು_

ಗುರುವು ಹೇಳಿದ್ದಾನೆ ಎಂಬ ಕಾರಣಕ್ಕೆ ಸಾಧನೆ ಮಾಡು ಸಾಕು. ಗುರುಗಳು ಹೇಳಿದ್ದನ್ನು ಶಿಷ್ಯನು ಮಾಡುತ್ತಾನೆಯೇ ಇಲ್ಲವೇ ಎಂಬುದನ್ನು ಗುರು ಪರೀಕ್ಷಿಸುತ್ತಾನೆ ಅಷ್ಟೆ. ಸಾಧನೆಯೆಂದರೆ ಯೋಗಾಸನ-ವ್ಯಾಯಾಮಗಳಲ್ಲ. ಕೇವಲ ಶರೀರದಂಡನೆಯೂ ಸಾಧನೆಯಲ್ಲ. ಮನಸ್ಸಿನಿಂದ ಆ ಗುರು ಹೇಳಿದಂತೆ ಮಾಡು. ಗುರುವು ನಿನ್ನಿಂದ ಹೆಚ್ಚಿನದೇನನ್ನೂ ಬಯಸುವುದಿಲ್ಲ.


ಉತ್ತಮ ಸಾಧಕ ಎಂದೂ ಕುಟುಂಬಕ್ಕಾಗಲೀ ಸಮಾಜಕ್ಕಾಗಲೀ ಕಂಟಕನಾಗುವುದಿಲ್ಲ. ಏಕೆಂದರೆ ಅವನಿಗೆ "ತನಗೋಸ್ಕರ" ಎಂಬ ಯಾವ ಅಪೇಕ್ಷೆ ಇರುವುದಿಲ್ಲ. ಆ ನಿರಪೇಕ್ಷತೆಯನ್ನೇ ಗುರುವು ಆತನಿಗೆ ಉಪದೇಶಿಸಿರುತ್ತಾನೆ. ಉತ್ತಮ ಸಾಧಕನಿಗೆ ತಾನೊಬ್ಬ ವಿಶೇಷ, ಪ್ರತ್ಯೇಕ ಎಂಬಿತ್ಯಾದಿ ಗುಂಗು ಇರುವುದಿಲ್ಲ. ಮನೆಯಲ್ಲಿ ನಿನ್ನ ಪತ್ನಿ ಮಂಚ ಬೇಕು ಎಂದರೆ ಪ್ರೀತಿಯಿಂದ ಕೊಡಿಸು, ಆದರೆ "ತನಗೆ" ಎಂದು ಮಾಡಿಕೊಳ್ಳಬೇಡ. ನಿನಗೆ ಎಲ್ಲಿ ಮಲಗಿದರೂ ನಡೆದೀತು. ನೆಲವಾದರೂ ಸಾಕು. ಒಟ್ಟಾರೆ ಇಂತಹುದೇ ಆಗಬೇಕೆಂದು ಬಯಸಬೇಡ. ಮನೆಯಲ್ಲಿ ನಾಲ್ಕು ಜನರು ಇರುತ್ತಾರೆ. ಅವರನ್ನೆಲ್ಲ ಯಾವಾಗಲೂ ವಿರೋಧಿಸಬೇಡ. "ತನಗೆ ಇಲ್ಲ" ಎಂದೆಲ್ಲ ಚಿಂತೆ ಮಾಡಬೇಡ. ಅದರಿಂದ ಬೇರೆಯವರೂ ಸುಖದಲ್ಲಿ ಇರುತ್ತಾರೆ. ನಿನಗೆ ಏನೂ ಬೇಡ ಎಂದಾದಾಗ ಸಹಜವಾಗಿಯೇ ಬೇರೆಯವರೂ ಸಮಾಧಾನದಲ್ಲಿ ಇರುತ್ತಾರೆ. ಹೊರಗೆ ಯಾರೋ ಭಿಕ್ಷುಕ "ಭಿಕ್ಷಾಂದೇಹಿ" ಎಂದರೆ ನಿನ್ನ ಬಟ್ಟಲಲ್ಲಿ ಇದ್ದ ಅನ್ನವನ್ನು ಸ್ವಲ್ಪ ಅವನಿಗೆ ಹಾಕು. ಆದರೆ ಬೇರೆಯವರ ಹತ್ತಿರ ತನಗೆ ಹಾಕು ಎಂದು ಹೇಳಬೇಡ. ಆಗ ನಿನ್ನ ತ್ಯಾಗದಿಂದ ಬೇರೆಯವರಿಗೆ ತೊಂದರೆ ಆಗುವುದಿಲ್ಲ. ನಿನಗೆ ಊಟಕ್ಕೆ ಇಂತಹುದೇ ಪದಾರ್ಥ ಬೇಕು ಎಂದೆಲ್ಲ ಇಟ್ಟುಕೊಳ್ಳಬೇಡ.  ಏನಿದೆಯೋ ಅದರಲ್ಲಿ ಹೊಟ್ಟೆತುಂಬ ಊಟ ಮಾಡು. ಆಗ ಬೇರೆಯವರಿಗೆ ಬೇಸರವಾಗುವುದಿಲ್ಲ.


ಒಟ್ಟಾರೆ "ತನಗೋಸ್ಕರ" ಎಂದು ಬದುಕಿದರೆ ನೀನು ಈ ಸಂಸಾರದಲ್ಲಿ ಸಿಕ್ಕಿಬೀಳುತ್ತೀಯಾ. ತನಗೆ ಬೇಡವೆಂಬ ರೀತಿಯಲ್ಲಿ ಸಾಧನೆ ಮಾಡುವುದರಿಂದ ನೀನು ಇದಕ್ಕೆ ಅಂಟಿಕೊಳ್ಳುವುದಿಲ್ಲ. ಆಗ ಈ ಪ್ರಪಂಚವೇ ಸತ್ಯ ಎಂಬ ಭ್ರಮೆ ನಿನಗೆ ಇರುವುದಿಲ್ಲ. ನೋಡು! ಈ ಜಗತ್ತಿನಲ್ಲಿ ನೀನಂದುಕೊಂಡಂತೆ ಏನೂ ನಡೆಯುವುದಿಲ್ಲ. ನಿನ್ನಿಂದ ಕೂದಲು ಹಣ್ಣಾಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಚರ್ಮ ಸುಕ್ಕುಗಟ್ಟುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅಂದ ಮೇಲೆ ನೀನು ಇಲ್ಲಿ ಏನನ್ನು ಸಾಧಿಸುತ್ತೀಯಾ?

ಸಾಧಕನಾದವನು ಏನನ್ನೂ ನಿರೀಕ್ಷಿಸುವುದಿಲ್ಲ. ಮಕ್ಕಳನ್ನು ಬೆಳೆಸುವ ಕಾಲಕ್ಕೆ ನೀನು ಅವರಿಂದ ಏನನ್ನೂ ನಿರೀಕ್ಷಿಸಬೇಡ. ಒಳ್ಳೆಯ ಸಂಸ್ಕಾರವನ್ನು ಅವರಿಗೆ ಕೊಡಲು ಪ್ರಯತ್ನಿಸು ಅಷ್ಟೆ. ನಿತ್ಯ ಹಿರಿಯರಿಗೆ ನಮಸ್ಕಾರ ಮಾಡಿಸು. ಅದೊಂದು ಶಾಸ್ತ್ರ (ಶುದ್ಧ ವಿಜ್ಞಾನ).  ಆ ರೀತಿ ಮಾಡಿಸುವುದರಿಂದ ಅವರು ಹಿರಿಯರನ್ನು ಗೌರವಿಸುತ್ತಾರೆ. ಸಮಯಕ್ಕೆ ಸರಿಯಾಗಿ ಸಂಧ್ಯಾವಂದನೆ ಮಾಡಿಸು. ಒಳ್ಳೆಯ ಸಂಸ್ಕಾರವಂತನಾಗಲಿ, ಪರಮಾತ್ಮನಿಗೆ ಪ್ರೀತಿಯಾಗುವಂತೆ ನಡೆದುಕೊಳ್ಳಲಿ ಎಂದು ಬಯಸು. ತಪ್ಪಲ್ಲ. ಆದರೆ ಅವರ ಮೇಲೆ ಒತ್ತಡ ಹೇರಬೇಡ. ಪ್ರಪಂಚದಲ್ಲಿ ಪ್ರತಿಯೊಬ್ಬರೂ ಸ್ವತಂತ್ರ ಕರ್ಮದ ಪಿಂಡಗಳೇ. ನಿನ್ನ ಮಗನು ನೀನು ಹೇಳಿದಂತೆ ಕೇಳಲೆಂದೇ ಹುಟ್ಟಿಲ್ಲ. ಅವನಿಗೆ ಅವನದ್ದೇ ಆದ ಕರ್ಮವಿದೆ. ಆದರೆ ಅದು ನಿನ್ನ ಕರ್ಮ ಖರ್ಚಾಗಲು ಅನುಕೂಲವಾಗುವ ಹಾಗೆ ಬಂದಿರುತ್ತದೆ. ನೀನು ಅವನ ಮೇಲೆ ಒತ್ತಡ ಹೇರುವುದರಿಂದ (ಅವನು ನಿನಗೆ ಬೇಕಾದಂತೆಯೇ ಬದುಕಿದರೆ) ನಿನ್ನ ಕರ್ಮ ವ್ಯಯವಾಗುವುದಿಲ್ಲ. ಆಗ ನಿನ್ನ ನಿರೀಕ್ಷೆ ಪರಮಾತ್ಮನ ಶಾಸನದ ವಿರುದ್ಧ ಆದಂತಾಯಿತು. ಯಾರೋ ಹೇಳುತ್ತಾರೆ, ತನ್ನ ಮಗ ಮೊದಲನೇ ಸ್ಥಾನದಲ್ಲೇ ತೇರ್ಗಡೆಯಾಗುತ್ತಿಲ್ಲ ಎಂದು. ಆ ಸಾಮರ್ಥ್ಯ ಅವನಿಗೆ ಇಲ್ಲದೇ ಇರಬಹುದು. ಅದರಿಂದಲೇ ಒಳ್ಳೆಯದಾಗುತ್ತದೆ ಎಂದೆಲ್ಲ ಇಲ್ಲವಲ್ಲ, ಕೃಷಿಯನ್ನು ಕೂಡ ಮಾಡಬಹುದು. SSLC, PUC ಮಕ್ಕಳೆಲ್ಲಾ FAIL ಆದಾಗ ಆತ್ಮಹತ್ಯೆ ಮಾಡಿಕೊಳ್ಳುವುದೂ ಈ ರೀತಿಯ ಒತ್ತಡಗಳಿಂದಲೇ. ಇಂತವರ ಮಧ್ಯೆ ಬದುಕುವುದಕ್ಕಿಂತ ಅವರಿಗೆ ಸಾವೇ ಒಳ್ಳೆಯದಾಗಿ ಕಂಡುಬಿಡುತ್ತದೆ. ಹಾಗೆಲ್ಲ ಒತ್ತಡ ಹೇರಬೇಡ. ಸರಳವಾಗಿ ಬದುಕುವ ಸಾಧಕ ತಂದೆ-ತಾಯಿಯರನ್ನು, ಹಿರಿಯರನ್ನು ಗೌರವಿಸುತ್ತಾನೆ. ಅದೇ ಸಾಧನೆಯಾಗುತ್ತದೆ. 

ನೆನಪಿಡು, "ಸಾಧನೆಯೆಂದರೆ ಕೇವಲ ಜಪ ಮಾಡುವುದೊಂದೇ ಅಲ್ಲ. ಸಾಧನೆಯೆಂದರೆ ನಿನ್ನಿಂದ ಯಾರಿಗೂ ತೊಂದರೆಯಾಗದಂತೆ ಬದುಕುವುದು."


Comments

Popular posts from this blog

ಶ್ರೀ ಚಕ್ರ ಮತ್ತು ಅದರ ಮಹಿಮೆ

ಶ್ರೀಚಕ್ರ ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಸೃಷ್ಟಿಯ ಜನನಿ ಶ್ರೀ ಲಲಿತೆಯ ಮೂರ್ತ ರೂಪದ ರೇಖಾಯಂತ್ರ. ಆದಿ ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ ಶಕ್ತಿದೇವಿಯ ಸಾತ್ವಿಕ ರೂಪವು ಉಗಮಿಸುವಂತೆ ಮಾಡಿದರು. ಕ್ರಮಬದ್ಧವಾಗಿ ರಚಿಸಿದ ಶ್ರೀಚಕ್ರದ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀಲಲಿತಾ ದೇವಿಯ ಚಿತ್ರ ಗೋಚರಿಸಿದ್ದು ದಾಖಲಾಗಿದೆ. ಜೊತೆಗೆ ಶಬ್ಧವನ್ನು ದೃಶ್ಯರೂಪವಾಘಿ ಪರಿವರ್ತಿಸುವ ವಿಜ್ಞಾನ ಶಬ್ಧ ಹಾಗೂ ಕಂಪನಗಳ ಪ್ರಭಾವದ ಅರಿವು ಮೂಡಿಸುತ್ತಿದೆ, ಶ್ರೀಚಕ್ರದ ಮೇಲೆ ಇಟ್ಟ ದೃಷ್ಟಿ ನರಮಂಡಲದಲ್ಲಿ ಉಂಟಾಗುವ ಕಂಪನ ಇಇಜಿಯಲ್ಲಿ (ಎಲೆಕ್ಟ್ರೋ ಎನ್ ಕೆಫಲೋಗ್ರಾಫ್) ಆಲ್ಫಾ ಅಲೆ ಹೊರಡಿಸುತ್ತದೆ. ಧ್ಯಾನ ಸ್ಥಿತಿಯಲ್ಲೂ ಈ ಅಲೆ ನಿಧಾನಗತಿಯಲ್ಲಿ ಹೊರಹೊಮ್ಮುತ್ತದೆ, ಯಾವುದೇ ಇತರ ಚಕ್ರ ವೀಕ್ಷಿಸಿದಾಗ ಇಇಜಿ ಅಲೆಗಳಲ್ಲಿ ಬದಲಾವಣೆ ಕಂಡುಬರುವುದಿಲ್ಲ, ಶಕ್ತಿಯುತ ಅಣು ಕ್ಷಣಗಳಿಂದಾದ ಅಲೆ ವಿದ್ಯುತ್ ಅಯಸ್ಕಾಂತ ಬಲಕಾರಕ ಶಕ್ತಿ ಸಮಾಗಮಕ್ಕೆ ನಾಂದಿ, ಶ್ರೀಚಕ್ರದ ಮೂಲಕ ದಿವ್ಯ ಮಂತ್ರೋಚ್ಚಾರಗಳಿಂದಾದ ಶಬ್ಧ ಬ್ರಹ್ಮ ಶಕ್ತಿ ಇದನ್ನು ಸಾಧಿಸುತ್ತದೆಂದು ಭಾವಿಸಬಹುದು, ಒಂದು ದೃಷ್ಟಿಯಲ್ಲಿ ಆದಿ ಶಂಕರಾಚಾರ್ಯರನ್ನು ಕಣ ಭೌತ ಶಾಸ್ತ್ರದ ಪಿತಾಮಹ ಎನ್ನಬಹುದು. ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನೇ ನಿಗ್ರಹಿಸಿದರು, ಶ್ರೀ ಸೌಂದ...

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ ಅಂದರೆ .. ಎಂಜಲು, ಶಿವನ ನಿರ್ಮಾಲ್ಯ, ವಾಂತಿ, ಹೆಣದ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದ್ದು. ಈ ಐದು ಅತ್ಯಂತ ಪವಿತ್ರವಾದವುಗಳು...!! ಎಂದು . ೧. ಉಚ್ಚಿಷ್ಟಮ್ - ಎಂದರೆ ಎಂಜಲು . ಹಾಲು ಕರುವಿನ ಎಂಜಲು. ಹಸುವಿನ ಹಾಲನ್ನು ಕರು ಕುಡಿದು ಹಾಗೇ ಬಿಟ್ಟಿರುತ್ತದೆ . ಆ ಎಂಜಲು ಹಾಲನ್ನೇ ನಾವು ಉಪಯೋಗಿಸುತ್ತೇವೆ. ಕರುವಿನಿಂದ ಎಂಜಲಾದ ಹಾಲು ದೇವರಿಗೆ , ಪಂಚಾಮೃತಾಭಿಷೇಕಕ್ಕೆ ಬೇಕಾದ ಅತ್ಯಂತ ಪವಿತ್ರ ವಸ್ತು. ೨. ಶಿವನಿರ್ಮಾಲ್ಯಮ್ - ಎಂದರೆ ಶಿವನ ಜಟೆಯಿಂದ ಹೊರಗೆ ಬಂದ ಗಂಗೆ . ಗಂಗಾ ನದಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವಾಗ ಅಹಂಕಾರದಿಂದ ಬರುತ್ತಿದ್ದಳು . ಆಗ ಗಂಗೆಯ ಗರ್ವವನ್ನು ದಮನ ಮಾಡುವುದಕ್ಕಾಗಿ ಪರಶಿವನು ಆ ಗಂಗೆಯನ್ನು ತನ್ನ ಜಟೆಯ ಮಧ್ಯೆ ಕಟ್ಟಿಹಾಕಿಬಿಟ್ಟ.  ಅನಂತರ ಆ ಜಟೆಯಿ೦ದ ಗಂಗಾನದಿಯನ್ನು ಹೊರಕೆ ಹಾಕಿದ.  ಶಿವನ ಜಟೆಯಲ್ಲಿದ್ದು ಅಲ್ಲಿಂದ ಮುಕ್ತಳಾದ್ದರಿಂದ ಗಂಗಾನದಿಯು ಶಿವನ ನಿರ್ಮಾಲ್ಯವಾಯಿತು.  ಆದರೂ ಈ ಗಂಗೆಯು ಪವಿತ್ರ. ೩. ವಮನಮ್ - ಎಂದರೆ ವಾಂತಿ . ಜೇನುತುಪ್ಪ . ಜೇನುಹುಳುಗಳು ಬೇರೆಬೇರೆಯ ಗಿಡಮರಗಳಿಂದ ಮಕರಂದವನ್ನು ಬಾಯಲ್ಲಿ ಹಿಡಿದು ತಂದು,  ಬಾಯಿಂದಲೇ ಆ ಮಕರಂದವನ್ನು ಗೂಡಿನಲ್ಲಿ ಇಟ್ಟಿರುತ್ತವೆ.  ಅದೇ ಜೇನು ತುಪ್ಪ.  ಇದು ಜೇನುಹುಳುಗಳ ವಮನ. ಆದರೆ ಜೇನು...

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು? ಏಕೆ?

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು?  ಏಕೆ? ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು. ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ| ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:|| ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ. ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು  ?  ಏಕೆ? ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇ...