Skip to main content

Posts

Showing posts from 2022

ಶ್ರದ್ಧಾ ಜ್ಞಾನಂ ದದಾತಿ

ಶ್ರದ್ಧಾ ಜ್ಞಾನಂ ದದಾತಿ "ಶ್ರದ್ಧಾ ಜ್ಞಾನಂ ದದಾತಿ"ಅಂದರೆ,ಶ್ರದ್ಧೆ ಜ್ಞಾನವನ್ನು ಕೊಡುತ್ತದೆ.ನಿಜ.. ಜ್ಞಾನ ಬೇಕೆಂದರೆ ಶ್ರದ್ಧೆ ಹಾಗೂ ಏಕಾಗ್ರತೆ ಇರಲೇಬೇಕು."ಶ್ರದ್ಧಾವಾನ್ ಲಭತೇ ಜ್ಞಾನಮ್"ಶ್ರದ್ಧಾವಂತರು ಮಾತ್ರ ಜ್ಞಾನದಲ್ಲಿ ಪರಿಪೂರ್ಣತೆಯನ್ನು ಹೊಂದುತ್ತಾರೆ. ಹಾಗೇ ಜ್ಞಾನದ ಮೂಲಕ ಪರಮಶಾಂತಿಯನ್ನು ಗಳಿಸುತ್ತಾರೆ."ಜ್ಞಾನಂ ಲಬ್ಧ್ವಾ ಪರಾಶಾಂತಿಂ ಅಚಿರೇಣಾಧಿಗಚ್ಛತಿ"ಪ್ರಪಂಚದಲ್ಲಿರುವ ಸಕಲ ಚರಾಚರಗಳ ಅಸ್ತಿತ್ವವಿರುವುದು ಶ್ರದ್ಧೆಯಲ್ಲೇ.ಋಗ್ವೇದದ ಶ್ರದ್ಧಾಸೂಕ್ತ ಶ್ರದ್ಧೆಯ ಮಹತ್ವವನ್ನು ಸುಂದರವಾಗಿ ತಿಳಿಸುತ್ತದೆ. ಪಂಚಭೂತಗಳ ಇರುವಿಕೆಯಿರುವುದು ಶ್ರದ್ಧೆಯಲ್ಲೇ,"ಶ್ರದ್ಧಯಾಗ್ನಿಃ ಸಮಿಧ್ಯತೇ ಶ್ರದ್ಧಯಾ ವಿಂದತೇ ಹವಿಃ" ಅಗ್ನಿ ಉರಿಯುವುದು ಶ್ರದ್ಧೆಯಿಂದ.ಅಗ್ನಿಗೆ ಹವಿಸ್ಸನ್ನು ಅರ್ಪಿಸುವುದು ಶ್ರದ್ಧೆಯಿಂದ,ಸೂರ್ಯ,ಚಂದ್ರರು ಬೆಳಕನ್ನು ನೀಡುವುದು ಶ್ರದ್ಧೆಯಿಂದ.ಆಗಸ ಮಳೆ ಸುರಿಸುವುದು ಶ್ರದ್ಧೆಯಿಂದ.ದಾನ-ಧರ್ಮಗಳನ್ನು ಮಾಡಬೇಕಾದ್ದೂ ಶ್ರದ್ಧೆಯಿಂದ.ಯಾರು ಪರಿಪೂರ್ಣ ಶ್ರದ್ಧೆಯಿಂದ ತನ್ನ ಕಾರ್ಯವನ್ನು ಮಾಡುತ್ತಾರೋ ಅಂತವರಿಗೆ ಕಾರ್ಯಫಲ ಸಿದ್ಧಿಯಾಗುತ್ತದೆ. ಜ್ಞಾನ ಸುಲಭವಾಗಿ ಗಳಿಸುವಂತದ್ದಲ್ಲ.ಹಣದಿಂದ ಖರೀದಿಸಲು ಸಾಧ್ಯವಾಗುವಂತದ್ದಲ್ಲ.ಜ್ಞಾನವನ್ನು ಗಳಿಸಬೇಕೆಂದರೆ ಒಬ್ಬ ಯೋಗ್ಯ ಗುರುವನ್ನು ಆಯ್ಕೆ ಮಾಡಿಕೊಳ್ಳಬೇಕು."ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ".ಶ್...

ಆತ್ಮದರ್ಶನ

 ಏನು ಮನುಷ್ಯ ಜನ್ಮದ ಉದ್ದೇಶ ? ನದಿಯೆಲ್ಲೇ ಹುಟ್ಟಲಿ ಕೊನೆಗೆ ಸೇರುವುದು ಸಾಗರವನ್ನೇ.ಮನುಷ್ಯನೆಷ್ಟೇ ದೊಡ್ಡವನಾಗಿರಲಿ ಕೊನೆಗೆ ಸೇರುವುದು ಮಸಣವನ್ನೇ..!! ಜಾತಸ್ಯ ಹಿ ಧ್ರುವೋ ಮೃತ್ಯುಃ.ಹುಟ್ಟಿದ ಕೂಡಲೇ ಸಾವು ನಿಶ್ಚಯ.ಮೃತ್ಯು ಯಾರನ್ನು ಕೇಳಿ,ಅಂಗಲಾಚಿ ಬರುವುದಿಲ್ಲ.ಸಾವಿರದ ಮನೆಯ ಸಾಸಿವೆಯೇ ಇಲ್ಲ.ಆದರೂ ಎಂತಹ ಮೂಢರು ನಾವು.ಸಾವನ್ನೇ ಮರೆತು,ಪ್ರಪಂಚದ ವೈಭೋಗದಲ್ಲಿ ಮನುಷ್ಯ ಜನ್ಮದ ಉದ್ದೇಶವನ್ನೇ ಮರೆತು ಜೀವಿಸುತ್ತಿದ್ದೇವೆ..!! ಪುನರ್ಜನ್ಮವನ್ನು ನಂಬುವವರು ನಾವು.ಹಾಗಾಗಿ ಎಲ್ಲ ಜನ್ಮಗಳಲ್ಲೂ ಮನುಷ್ಯಜನ್ಮವೇ ಶ್ರೇಷ್ಟ.”ಜಂತೂನಾಂ ನರಜನ್ಮ ದುರ್ಲಭಮ್”.ಈ ಮನುಷ್ಯ ಜನ್ಮ ಬಹಳ ಸುಲಭವಾಗಿ ಸಿಕ್ಕಿದ್ದಲ್ಲ ಸ್ವಾಮೀ. ಹಲವಾರು ಜನ್ಮಗಳ ಪುಣ್ಯದ ಫಲ. ಭಗವಂತ ಮನುಷ್ಯನಿಗಷ್ಟೇ ವಿಶೇಷವಾದ ಜ್ಞಾನವನ್ನು ಕೊಟ್ಟ.ಜಗತ್ತಿನ ಸಕಲ ಚರಾಚರಗಳನ್ನು ನಿರ್ವಹಿಸುವ ದೊಡ್ಡ ಜವಾಬ್ದಾರಿ ಕೊಟ್ಟ.ಆದರೆ ಆ ಜವಾಬ್ದಾರಿಯನ್ನು ನಾವು ಸರಿಯಾಗಿ ನಿರ್ವಹಿಸುತ್ತಿದ್ದೇವಾ..?ಪ್ರಾಣಿಗಳೂ ಕಚ್ಚಾಡುತ್ತವೆ.ಹಾಗೇ ನಾವೂ ಕಚ್ಚಾಡುತ್ತಿದ್ದೇವೆ.ಅಂದಮೇಲೆ ಮನುಷ್ಯನಿಗೂ,ಪ್ರಾಣಿಗಳಿಗೂ ಏನು ವ್ಯತ್ಯಾಸ..? ಹಾಗಾದರೆ,ಮನುಷ್ಯಜನ್ಮದ ಉದ್ದೇಶ..?ಸುಖೋಪಭೋಗವೇ...?ಕೇವಲ ಅದಕ್ಕಾಗಿಯೇ ಇಲ್ಲಿಗೆ ಬಂದಿದ್ದೇವೆಯೇ..?ತಿಂದುಂಡು ಮಜಾ ಮಾಡಿ,ಯಾರಿಗೂ ಕೊಡದೇ ಶೇಖರಿಸಿ ಕೊನೆಗೆ ಬರಿಗೈಯ್ಯಲ್ಲಿ ನಡೆಯುವುದೇ..? ಖಂಡಿತಾ ಅಲ್ಲ.. ಮನುಷ್ಯಜನ್ಮ ಸಾರ್ಥಕ್ಯವನ್ನು ಪಡೆಯಬೇಕು..ಅದಕ್ಕೇನು ಮಾಡಬೇ...

ಲೋಕಕ್ಕೆ ಆಮುಷ್ಮಿಕ ಜ್ಞಾನಮಾರ್ಗವನ್ನು ದರ್ಶಿಸಬಲ್ಲ ಸಾಮರ್ಥ್ಯ ಕೇವಲ ಲೌಕಿಕ ಜ್ಞಾನ ಸಂಪಾದನೆಯಿಂದ ಸಾಧ್ಯವಾಗುವುದಿಲ್ಲ.. ಅದಕ್ಕೆ ವ್ಯಕ್ತಿಯೋರ್ವ ದಾರ್ಶನಿಕನಾಗಿರಬೇಕಾಗುತ್ತದೆ.

ಲೋಕದಲ್ಲಿ ಭಾರತೀಯ ಪರಂಪರೆ ಅತಿ ಪ್ರಾಚೀನವಾದದ್ದು, ಪರಮಾತ್ಮ ತತ್ವವನ್ನು ಲೋಕಕ್ಕೆ ಸಾರಿದ್ದು, ಬದುಕಿನಲ್ಲಿ ಐಹಿಕ ಹಾಗೂ ಆಮುಷ್ಮಿಕ ಎಂಬ ಎರಡು ಬದುಕಿನ ತುರೀಯಾವಸ್ಥೆಗಳಿವೆ ಎಂದು ಪ್ರಪಂಚಕ್ಕೆ ಸಾರಿದ್ದು.ಇಲ್ಲಿನ ವೇದಗಳು, ಉಪನಿಷತ್ತುಗಳು, ಶಾಸ್ತ್ರಗಳು, ಪುರಾಣಗಳು, ಮಹಾಕಾವ್ಯಗಳು, ಇನ್ನೂ ಅ ನೇಕ ಸಾಹಿತ್ಯಗಳು ಮನುಷ್ಯನ ಬದುಕಿನಲ್ಲಿನ ಎರಡೂ ಕಾಲ ಘಟ್ಟಗಳ ಕುರಿತು ಮಾಹಿತಿಯನ್ನು ನೀಡುತ್ತವೆ ಮತ್ತು ಅವುಗಳಲ್ಲಿ ಆತ್ಯಂತಿಕವಾಗಿ ಸಾಧಿಸಬೇಕಾದ್ದು ಎರಡನೇಯದಾದ ಆಮುಷ್ಮಿಕ ಅಂದರೆ ಶರೀರಿಯಾಗಿ ಬಾಳಿದ ನಂತರದಲ್ಲಿ ಅವನು ಹೊಂದಬಹುದಾದ ಮೋಕ್ಷದ ಮಾರ್ಗವನ್ನು ಹೆಚ್ಚು ಅವಲಂಬಿಸಿಕೊಂಡಿದೆ ಎಂದು ಸಾರುತ್ತದೆ. ಹಾಗಾಗಿ ಈ ಬದುಕಿನಲ್ಲಿ ಅಂದರೆ ವಾಸ್ತವದ ಬದುಕಿನಲ್ಲಿ ಮುಂದೆ ತಾನು ಗಳಿಸಬೇಕಾದ ಎರಡನೇ ಬದುಕಿನ ಸುಖ ಮಾರ್ಗವನ್ನು ಹೇಗೆಲ್ಲ ಕಂಡುಕೊಳ್ಲಬಹುದು ಎಂಬುದಕ್ಕೆ ಅನೇಕ ಕೈಂಕರ್ಯಗಳನ್ನು ವಿಧಿಗಳನ್ನೂ ಹೇಳಿ ದೆ.. ಅವುಗಳಲ್ಲಿ ವರ್ಣ- ಆಶ್ರಮ- ಧರ್ಮ- ಕಾಯಕ ಎಂಬ ಜೀವನ ವಿಧಾನಗಳೂ. ಸತ್ಯ, ಅಸ್ತೇಯ, ಶ್ರದ್ಧಾ, ಜ್ಞಾನ ಎಂಬ ಕರ್ಮ ವಿಧಾನಗಳೂ ಬಹು ವಿಶದವಾಗಿ ನಿರೂಪಿತವಾಗಿವೆ. ಇದರಲ್ಲಿ ಈ ವರ್ಣಾಶ್ರಮ ಎಂಬುದು ಒಂದನ್ನು ಇನ್ನೊಂದು ಅವಲಂಬಿಸಿ ಬದುಕಲು ಬೇಕಾದ ಸನ್ಮಾರ್ಗವನ್ನು ಹಾಕಿಕೊಟ್ಟ ವಿಚಾರವಾಗಿದೆ. ವರ್ಣದಲ್ಲಿ ಯಾವುದೂ ಕನಿಷ್ಠವೋ ಗರಿಷ್ಠವೋ ಎಂಬುದನ್ನು ತೋರದೇ.. ಕೇವಲ ಸೌಲಭ್ಯಾನುಸಾರವಾಗಿ ಮಾಡಿಕೊಂಡ ವ್ಯವಸ್ಥೆ ಎಂಬುದು ತಿಳಿದುಬರುತ್ತದೆ.....

ಧ್ಯಾನಿಸುವ ಬಗ್ಗೆ ಒಂದು ಚಿಂತನೆ

ಸಮತೋಲನದಲ್ಲಿರುವುದು ಮನಸ್ಸಿಗೆ ಅಸಾಧ್ಯ ಅದು ಅತ್ಯಂತ ಕಷ್ಟವೆಂದೇ ತೋರುತ್ತದೆ. ಸಮತೋಲನದಲ್ಲಿರುವುದು ಎಂದರೆ ಶೂನ್ಯದಲ್ಲಿರುವುದು. ಒಂದು ವಿಚಾರದಿಂದ ಇನ್ನೊಂದು ವಿಚಾರಕ್ಕೆ ಸಾಗುವುದು ಅತ್ಯಂತ ಸುಲಭ. ಒಂದು ಧ್ರುವದಿಂದ ಇನ್ನೊಂದಕ್ಕೆ ಸಾಗುವುದು ಮನಸ್ಸಿನ ಲಕ್ಷಣ. ನೀವು ಸಮತೋಲನದಿಂದಿದ್ದರೆ, ಮನಸ್ಸು ಕಣ್ಮರೆಯಾಗುತ್ತದೆ. ನೀವು ಅಸಮತೋಲನಗೊಂಡಾಗ ಅದು ಅಲ್ಲಿರುತ್ತದೆ, ನೀವು ಸಮತೋಲನಗೊಂಡಾಗ ಅದು ಮರೆಯಾಗುತ್ತದೆ. ಆದ್ದರಿಂದಲೇ ಅತಿಯಾಗಿ ತಿನ್ನುವವರಿಗೆ ಉಪವಾಸ ಮಾಡುವುದು ಸುಲಭ. ಈ ಮಾತು ಅತಾರ್ಕಿಕವೆಂದು ತೋರಬಹುದು. ಆಹಾರದ ಬಗ್ಗೆ ಕಡು ವ್ಯಾಮೋಹಿಯಾಗಿರುವವರು ಉಪವಾಸ ಮಾಡಲಾರರು ಎಂದುಕೊಳ್ಳುವಿರಿ. ಆದರೆ ತಪ್ಪು. ಆಹಾರದ ಬಗ್ಗೆ ಕಡು ವ್ಯಾಮೋಹಿಯಾದ ವ್ಯಕ್ತಿಯೇ ಉಪವಾಸ ಮಾಡಬಲ್ಲ. ಏಕೆಂದರೆ ಉಪವಾಸ ಎಂದರೆ ಅದೇ ಕಡು ವ್ಯಾಮೋಹ, ಆದರೆ ವಿರುದ್ಧ ದಿಕ್ಕಿನಲ್ಲಿ ಅಷ್ಟೆ. ನೀವು ನಿಮ್ಮನ್ನು ಬದಲಿಸಿಕೊಳ್ಳುತ್ತಿಲ್ಲ. ನೀವಿನ್ನೂ ಆಹಾರದ ಬಗ್ಗೆ ಕಡು ವ್ಯಾಮೋಹಿಯಾಗಿಯಿದ್ದೀರಿ. ಮೊದಲು ನೀವು ಅತಿಯಾಗಿ ತಿನ್ನುತ್ತಿದ್ದಿರಿ, ಈಗ ಹಸಿವೆಯಿಂದ ಇದ್ದೀರಿ. ಆದರೆ ಮನಸ್ಸು ಇನ್ನೂ ಆಹಾರದ ಕುರಿತೇ, ಆದರೆ ವಿರುದ್ಧ ದಿಕ್ಕಿನಲ್ಲಿ ಗಮನ ಕೇಂದ್ರೀಕರಿಸಿದೆ. ದ್ವೇಷವೂ ಹಾಗೆಯೇ. ಒಂದು ವಿಷಯದ ಕುರಿತು ನಿಮಗೆ ಪ್ರೀತಿ ಇರದಿದ್ದರೆ, ಕಾಳಜಿ ಇರದಿದ್ದರೆ ಹೇಗೆ ತಾನೇ ದ್ವೇಷಿಸಬಲ್ಲಿರಿ? ಪ್ರೀತಿ ಎನ್ನುವುದು ಆತ್ಯಂತಿಕ ದ್ವೇಷದ ಸಂಬಂಧವೆಂದು ಆಧುನಿಕ ಸಂಶೋಧನೆ ಹೇಳ...

ಅವಧೂತ ಲಕ್ಷಣ

ಅವಧೂತ ಲಕ್ಷಣಮ್ ಅವಧೂತ" ಅನ್ನುವ ಪದದ ಅರ್ಥ ನೋಡಿ ಎಷ್ಟು ಸುಂದರವಾದ ಜೋಡಣೆ!  'ಅವಧೂತ' ನಾಲ್ಕು ಅಕ್ಷರಗಳ ಜೋಡಣೆ ' ಅ ' ಕಾರ,  ' ವ ' ಕಾರ,  'ಧೂ' ಕಾರ ಹಾಗೂ  ' ತ ' ಕಾರಗಳಿಂದಾಗಿದೆ. ಮೊದಲನೇಯ 'ಅ' ಕಾರಕ್ಕೆ,  ಆಶಾಪಾಶವಿನಿರ್ಮುಕ್ತ  ಆದಿಮಧ್ಯಾಂತನಿರ್ಮಲಃ/ ಆನಂದೇ ವರ್ತತೇ ನಿತ್ಯಂ  ಅಕಾರಂ ತಸ್ಯ ಲಕ್ಷಣಮ್//ಅ// 'ಅ' ಎಂಬ ಮೊದಲನೇ ಅಕ್ಷರಕ್ಕೆ, ಆಶಾಪಾಶಗಳಿಂದ ಪಾರಾದವನು, ಆದಿ, ಮಧ್ಯೆ ಮತ್ತು ಅಂತ್ಯದವರೆಗೂ ಪೂರ್ಣವಾಗಿ ನಿರ್ಮಲನಾದವನು, ನಿತ್ಯವೂ ಆನಂದದಲ್ಲಿ ತಲ್ಲೀನನಾಗಿರುವವನು ಎಂದು ಅರ್ಥ. ಎರಡನೇಯ 'ವ' ಕಾರಕ್ಕೆ, ವಾಸನಾ ವರ್ಜಿತಾ ಯೇನ ವಕ್ತವ್ಯಂ ಚ ನಿರಾಮಯಮ್/ ವರ್ತಮಾನೇಷು ವರ್ತೇತ  ವಕಾರಂ ತಸ್ಯ ಲಕ್ಷಣಮ್//ವ// 'ವ' ಎಂಬ ಎರಡನೇಯ ಅಕ್ಷರಕ್ಕೆ, ವಾಸನೆಯಿಂದ ಪಾರಾದವನು, ನಿರಾಮಯನು, ಅನವರತವೂ ವರ್ತಮಾನದಲ್ಲಿ ತಲ್ಲೀನನಾಗಿರುವವನು ಎಂದು ಅರ್ಥ. ಮೂರನೇಯ 'ಧೂ' ಕಾರಕ್ಕೆ ಧೂಲಿಧೂಸರಗಾತ್ರಾಣಿ  ಧೂತಚಿತ್ತೋ ನಿರಾಮಯಃ/ ಧಾರಣಾಧ್ಯಾನನಿರ್ಮುಕ್ತೋ ಧೂಕಾರಸ್ತಸ್ಯ ಲಕ್ಷಣಮ್//ಧೂ// 'ಧೂ' ಎಂಬ ಮೂರನೇಯ ಅಕ್ಷರಕ್ಕೆ, ಅವನ ದೇಹ ಧೂಳಿನಿಂದ ತುಂಬಿದ್ದರೂ ಮನಸ್ಸು ಅಶುಚಿಯನ್ನೆಲ್ಲ ಕಳೆದುಕೊಂಡಿರುವುದು, ಧಾರಣ-ಧ್ಯಾನಗಳಿಂದ ನಿರ್ಮುಕ್ತನಾಗಿರುವವನು ಎಂದು ಅರ್ಥ. ನಾಲ್ಕನೇಯ 'ತ' ಕಾರಕ್ಕೆ, ತತ್ತ್ವಚಿಂತಾಧೃತಾಯೇನ ...

ಗೋವು ರಾಷ್ಟ್ರೀಯ ಸಂಪತ್ತು

 ★ ಗೋವಿನ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ಸುಮಾರು ಒಂದು ಟನ್ನುಗಳಷ್ಟು ಆಮ್ಲಜನಕ ಬಿಡುಗಡೆಯಾಗುತ್ತೆ !!. ★ ಗೋವಿಗೆ ವಿಷವನ್ನು ಸತತ 90 ದಿನಗಳವರೆವಿಗೂ ನೀಡುತ್ತಾ ಬಂದರೂ ಅದರ ಹಾಲಿನಲ್ಲಿ ವಿಷದ ಪ್ರಮಾಣ ಕಿಂಚಿತ್ತೂ ಇರುವುದಿಲ್ಲ... ದೇಶ ಕಂಡ ಅತೀ ದೊಡ್ಡ ದುರಂತ "ಭೋಪಾಲ್ ಅನಿಲ ದುರಂತ" ನೀವು ಕೇಳಿರಬಹುದು. ಆ ದುರಂತ ಆದಾಗ ಸುಮಾರು 10 ಕಿ.ಮೀ ವರೆಗೆ ವಾಸವಿದ್ದ ಎಲ್ಲ ಜನರು ಸಾವೀಗಿಡಾದರು. ಆದರೆ ಕೇವಲ 1 ಕಿ.ಮೀ ದೂರವಿದ್ದ 4 ಬ್ರಾಹ್ಮಣ ಕುಟುಂಬಕ್ಕೆ ಏನೂ ಆಗಿರಲಿಲ್ಲ. ಇದರಿಂದ ಆಶ್ಚರ್ಯ ಚಕಿತರಾದರು ಸಂಶೋಧಕರು ಅವರ ಮನೆಯನ್ನು ಅಧ್ಯಯನ ನಡೆಸಿದಾಗ ಅವರ ಮನೆಯಲ್ಲಿ ದಿನ ನಿತ್ಯ 2 ಹೊತ್ತು "ಅಗ್ನಿ ಹೋತ್ರ" ಹೋಮ ಮಾಡುತ್ತಿದ್ದಾರೆಂದು ತಿಳಿಯಿತು. ಇದನ್ನು ತಿಳಿದ ಸಂಶೋಧಕರು ಬೇರೆ ಕಡೆ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂತು. H I V ಪೀಡಿತ ಮಕ್ಕಳಿಗಾಗಿ ಮೈಸೂರಲ್ಲಿ ಒಂದು ಶಾಲೆ ಇದೆ. ಇದರ ಸ್ಥಾಪಕರಾದ ರಾಮದಾಸ್ (ಮಾಜಿ ಶಾಸಕರು) ತಮ್ಮ ವಿದ್ಯಾರ್ಥಿಗಳ ಮೇಲೆ ಇದರ ಪ್ರಯೋಗ ಮಾಡಿದರು . ಆಗ ಇಲ್ಲಿನ ಮಕ್ಕಳಲ್ಲೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು. "ಅಗ್ನಿ ಹೋತ್ರ" ದ ವಿಧಾನ ಅಂದರೆ ಸಣ್ಣದಾದ ತಾಮ್ರದ ಹೋಮಕುಂಡಕ್ಕೆ ದನದ ಒಣ ಸಗಣಿ, ದನದ ತುಪ್ಪ ಹಾಕಿ ಅಗ್ನಿ ಸ್ಪರ್ಶ ಮಾಡಬೇಕು. ಇದನ್ನು ಬೆಳಿಗ್ಗೆ ಸೂರ್ಯೋದಯದ ಮೊದಲು, ಸಂಜೆ ಸೂರ್...

ಗೋಪಾಷ್ಟಮಿ ಸಾಧು ಸಂತರ ಹತ್ಯೆ ಖಂಡನೀಯ

ಗೋಪಾಷ್ಟಮಿ ನವಂಬರ್ 7,1966 ಅಂದು ಗೋಪಾಷ್ಟಮಿ ಸಾವಿರಾರು ಹಿಂದೂ ಸಾಧು-ಸಂತರು ಗೋಹತ್ಯಾ ನಿಷೇಧ ಮಾಡಲು ಉಗ್ರ ಹೋರಾಟ ಮಾಡುತ್ತಾರೆ ಆದರೆ ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಪ್ರತಿಭಟನಾಕಾರರ ಮೇಲೆ ಫೈರಿಂಗ್ ಆರ್ಡರ್ ಮಾಡುತ್ತಾರೆ ಪೊಲೀಸರ ಗುಂಡಗಳು ಸಿಡಿಯ ತೊಡಗಿದಾಗ ಅಲ್ಲಿದ್ದ ಹಿಂದುಗಳು ಸಾದು ಸಂತರು ದಿಕ್ಕುಪಾಲಾಗಿ ಓಡತೊಡಗಿದರು ಗಂಡೆದೆ ಕೊಟ್ಟು ಅಲ್ಲೇ ನಿಂತ ಹಲವಾರು ಸಾಧುಸಂತರು ಗುಂಡೇಟಿಗೆ ಬಲಿಯಾದರು ಅದೇ ಸಮಯದಲ್ಲಿ ಕೃಪಾರ್ಥಿ ಮಹಾರಾಜರಿಗೆ ಗುಂಡೇಟು ಬಿತ್ತು ನೆಲಕ್ಕುರುಳಿದ ಕೃಪಾರ್ಥಿ ಮಹಾರಾಜರ ಬಿದ್ದಲ್ಲಿ ತಡವರಿಸಿಕೊಂಡು  ನಾವು ಭಿಕ್ಷೆ ಕೊಟ್ಟ ಆಸ್ಥಾನದಲ್ಲಿ ಕೂತಿರುವವರೇ ಈ ದೇಶನಾ ನಿಮ್ಮ ಅಪ್ಪಂದಿರ ಆಸ್ಥಿ ಅಂತ ಅಂದುಕೊಂಡಿದ್ದೀರಾ,ನೀವು ನನ್ನೆದೆಗೆ ಗುಂಡಿಕ್ಕಿದ್ರೆ,ನಮ್ಮೆಲ್ಲಾ ಸಂತರನ್ನು ಕೊಲ್ಲುವುದಕ್ಕೆ ನೋಡಿದಿರಿ, ನಾನು ಸಾಯುತ್ತೇನೆ, ನನ್ನ ರಕ್ತ ಈ ದೇಶದ ಮಣ್ಣಿಗೆ ಸೇರುತ್ತಿದೆ, ಆದರೂ ಕೂಡ ನಾವೆಲ್ಲಾ ಸಂತರು ನಮಗೆ ಮಾಡಿರುವ ದ್ರೋಹಕ್ಕೆ ಕ್ಷಮಿಸುತ್ತೇವೆ. ಆದರೆ ಆ ಗುಂಡುಗಳು ಗೋ ಮಾತೆಗೂ ತಾಕ್ತಲ್ಲ, ಈ ಒಂದು ಪುಣ್ಯ ಭೂಮಿಯಲ್ಲಿ ಸಾಧುವಿನ ಎದರುಗಡೆ, ಗೋ ಮಾತೆ ಒದ್ದಾಡಿ, ಒದ್ದಾಡಿ ಸತ್ತವಲ್ಲ, ಆ ಗೋ ಮಾತೆಯ ಶಾಪ ನಿಮ್ಮನ್ನ ಬಿಡಲ್ಲ, ನಿಮ್ಮ ಇಡೀ ವಂಶ ಗೋಪಾಷ್ಟಮಿ ದಿನ ನಾಶವಾಗುತ್ತೆ, ಎನ್ನುತ್ತಾ ನೆಲಕ್ಕುರುಳುತ್ತಾರೆ. ಅದು ಸಹಜವೊ ಅಥವಾ ಆ ಮಹಾ ಸಾಧುವಿನ ಶಾಪವೋ ಕಾಕತಾಳಿಯವೋ ಆನಂತರ ನಡೆದದ್ದು ಇತಿಹಾಸ ಹಿಂ...

"ಸಾಧನೆ" ಎಂದರೆ ನಿನ್ನಿಂದ ಯಾರಿಗೂ ತೊಂದರೆಯಾಗದಂತೆ ಬದುಕುವುದು

ಒಮ್ಮೆ ಶಿಷ್ಯರೊಬ್ಬರು ಸದ್ಗುರುಗಳ ಬಳಿ ತಮಗೆ ಹೆಚ್ಚು ಸಮಯ ಧ್ಯಾನ, ಜಪಾದಿಗಳಿಗೆ ಕುಳಿತುಕೊಳ್ಳಲು ಆಗುತ್ತಿಲ್ಲ ಎಂದು ಹೇಳಿಕೊಂಡರು. ಅದಕ್ಕೆ ಪ್ರತಿಯಾಗಿ ಸದ್ಗುರುಗಳು ಹೀಗೆ ನುಡಿದರು_ ಗುರುವು ಹೇಳಿದ್ದಾನೆ ಎಂಬ ಕಾರಣಕ್ಕೆ ಸಾಧನೆ ಮಾಡು ಸಾಕು. ಗುರುಗಳು ಹೇಳಿದ್ದನ್ನು ಶಿಷ್ಯನು ಮಾಡುತ್ತಾನೆಯೇ ಇಲ್ಲವೇ ಎಂಬುದನ್ನು ಗುರು ಪರೀಕ್ಷಿಸುತ್ತಾನೆ ಅಷ್ಟೆ. ಸಾಧನೆಯೆಂದರೆ ಯೋಗಾಸನ-ವ್ಯಾಯಾಮಗಳಲ್ಲ. ಕೇವಲ ಶರೀರದಂಡನೆಯೂ ಸಾಧನೆಯಲ್ಲ. ಮನಸ್ಸಿನಿಂದ ಆ ಗುರು ಹೇಳಿದಂತೆ ಮಾಡು. ಗುರುವು ನಿನ್ನಿಂದ ಹೆಚ್ಚಿನದೇನನ್ನೂ ಬಯಸುವುದಿಲ್ಲ. ಉತ್ತಮ ಸಾಧಕ ಎಂದೂ ಕುಟುಂಬಕ್ಕಾಗಲೀ ಸಮಾಜಕ್ಕಾಗಲೀ ಕಂಟಕನಾಗುವುದಿಲ್ಲ. ಏಕೆಂದರೆ ಅವನಿಗೆ "ತನಗೋಸ್ಕರ" ಎಂಬ ಯಾವ ಅಪೇಕ್ಷೆ ಇರುವುದಿಲ್ಲ. ಆ ನಿರಪೇಕ್ಷತೆಯನ್ನೇ ಗುರುವು ಆತನಿಗೆ ಉಪದೇಶಿಸಿರುತ್ತಾನೆ. ಉತ್ತಮ ಸಾಧಕನಿಗೆ ತಾನೊಬ್ಬ ವಿಶೇಷ, ಪ್ರತ್ಯೇಕ ಎಂಬಿತ್ಯಾದಿ ಗುಂಗು ಇರುವುದಿಲ್ಲ. ಮನೆಯಲ್ಲಿ ನಿನ್ನ ಪತ್ನಿ ಮಂಚ ಬೇಕು ಎಂದರೆ ಪ್ರೀತಿಯಿಂದ ಕೊಡಿಸು, ಆದರೆ "ತನಗೆ" ಎಂದು ಮಾಡಿಕೊಳ್ಳಬೇಡ. ನಿನಗೆ ಎಲ್ಲಿ ಮಲಗಿದರೂ ನಡೆದೀತು. ನೆಲವಾದರೂ ಸಾಕು. ಒಟ್ಟಾರೆ ಇಂತಹುದೇ ಆಗಬೇಕೆಂದು ಬಯಸಬೇಡ. ಮನೆಯಲ್ಲಿ ನಾಲ್ಕು ಜನರು ಇರುತ್ತಾರೆ. ಅವರನ್ನೆಲ್ಲ ಯಾವಾಗಲೂ ವಿರೋಧಿಸಬೇಡ. "ತನಗೆ ಇಲ್ಲ" ಎಂದೆಲ್ಲ ಚಿಂತೆ ಮಾಡಬೇಡ. ಅದರಿಂದ ಬೇರೆಯವರೂ ಸುಖದಲ್ಲಿ ಇರುತ್ತಾರೆ. ನಿನಗೆ ಏನೂ ಬೇಡ ಎಂದಾದ...

ಯಾರು ಭಗವಂತನಲ್ಲೇ ಮನಸ್ಸನ್ನಿಟ್ಟು ಧ್ಯಾನ ಮಾಡುತ್ತಾರೋ ಅವರು ಎಲ್ಲರಿಗಿಂತ ಹಿರಿಯ ಯೋಗಿ

ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ । ಶ್ರದ್ಧಾವಾನ್ ಭಜತೇ ಯೋ ಮಾಂ ಸ ಮೇ ಯುಕ್ತತಮೋ ಮತಃ  ಯೋಗಿನಾಮ್ ಅಪಿ ಸರ್ವೇಷಾಮ್ ಮತ್ ಗತೇನ ಅಂತಃ ಆತ್ಮನಾ । ಶ್ರದ್ಧಾವಾನ್ ಭಜತೇ ಯಃ ಮಾಮ್ ಸಃ ಮೇ ಯುಕ್ತ ತಮಃ ಮತಃ   ನನ್ನಲ್ಲಿ ಒಳಬಗೆಯನ್ನಿರಿಸಿ ಶ್ರದ್ಧೆಯಿಂದ ನನ್ನನ್ನು ಸೇವಿಸುವವನು ಇತರ ಎಲ್ಲ ಧ್ಯಾನಯೋಗಿಗಳಿಗಿಂತಲು ಹಿರಿಯ ಯೋಗಿ ಎಂದು ನನ್ನ ತೀರ್ಮಾನ. ಧ್ಯಾನವನ್ನು ಮಾಡುವಾಗ ನಾವು ಮನಸ್ಸನ್ನು ಯಾವುದರಮೇಲೆ ಕೂಡ ಏಕಾಗ್ರ ಮಾಡಿ ಧ್ಯಾನ ಮಾಡಬಹುದು. ಕೆಲವರು ಅನೇಕ ಕ್ಷುದ್ರ ದೇವತೆಗಳು, ಭೂತ-ಪ್ರೇತಗಳನ್ನು ಉಪಾಸನೆ ಮಾಡುವವರಿದ್ದಾರೆ. ಆದರೆ ಕೃಷ್ಣ ಹೇಳುತ್ತಾನೆ “ಯಾರು ಭಗವಂತನಲ್ಲೇ ಮನಸ್ಸನ್ನಿಟ್ಟು ಧ್ಯಾನ ಮಾಡುತ್ತಾರೋ ಅವರು ಎಲ್ಲರಿಗಿಂತ ಹಿರಿಯ ಯೋಗಿ” ಎಂದು. ಭಗವಂತನನ್ನು ಬಿಟ್ಟು ಇನ್ನೇನನ್ನೋ ಧ್ಯಾನ ಮಾಡಿದರೆ ಏನೂ ಉಪಯೋಗವಿಲ್ಲ. ನಮ್ಮ ಜೋತಿಷಿಗಳು ಸಾಮಾನ್ಯವಾಗಿ ‘ಇಂತಹ ಗ್ರಹಚಾರಕ್ಕೆ ಇಂತಹ ದೇವತೆಯನ್ನು ಉಪಾಸನೆ ಮಾಡು’ ಎಂದು ಹೇಳುತ್ತಾರೆ. ಅದರರ್ಥ ಭಗವಂತನನ್ನು ಆ ಪ್ರತೀಕದಲ್ಲಿ ಕಾಣು ಎಂದರ್ಥ. ಯಾವುದೇ ದೇವತೆಯನ್ನು ಉಪಾಸನೆ ಮಾಡುವಾಗ ಆ ಪ್ರತೀಕದಲ್ಲಿ ಭಗವಂತನ ಉಪಾಸನೆ ಮಾಡದಿದ್ದರೆ ಅದು ನಿಜವಾದ ಯೋಗವಾಗುವುದಿಲ್ಲ. ಧ್ಯಾನದಲ್ಲಿ ಕೇವಲ ಭಗವಂತನನ್ನು ಕಾಣಬೇಕು ಎನ್ನುವ ಬಯಕೆ ಮತ್ತು ಎಲ್ಲಾ ಪ್ರತೀಕದಲ್ಲೂ ಅವನನ್ನೇ ಕಾಣುವುದು ಶ್ರೇಷ್ಠವಾದ ಯೋಗ. ಈ ರೀತಿ ಬದುಕಿದಾಗ ನಮ್ಮ ಬದುಕೇ ಒಂದು ಯೋಗವಾಗುತ್ತದೆ.

ಅಮೇರಿಕದ ಓರೆಗನ್ ಎಂಬ ಕೆರೆ ಒಣಗಿದೆ...ಕೆರೆಯ ತಳ ಭಾಗದಲ್ಲಿ ಮಹಾಮೇರು ಶ್ರೀಚಕ್ರ

 ನಮ್ಮ ಸನಾತನ ಸಂಸ್ಕೃತಿಯೆ ಪ್ರಪಂಚದಲ್ಲಿ ಮೊಟ್ಟ ಮೊದಲ ಸಂಸ್ಕೃತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳ ಬಹುದು. ... ಇಲ್ಲಿ ನೋಡಿ.... ಅಮೇರಿಕದ ಓರೆಗನ್ ಎಂಬ ಕೆರೆ ಒಣಗಿದೆ...ಕೆರೆಯ ತಳ ಭಾಗದಲ್ಲಿ ಮಹಾಮೇರು ಶ್ರೀಚಕ್ರ ಯಂತ್ರ ವಿದೆ.. 13.3 ಮೈಲಿ ಅಗಲ ಮತ್ತು 13.3 ಮೈಲಿ ಉದ್ದ ಪ್ರತಿ ಎಳೆ 10 ಇಂಚು  ಅಗಲ ಮತ್ತು  3 ಇಂಚಿನಷ್ಟು ಆಳವಿದೆ ಈ ಚಿತ್ರ ಪೂರ್ತಿ  ತೆಗೆಯಲು ವಿಜ್ಞಾನಿಗಳು 9000 ಅಡಿ ಎತ್ತರಕ್ಕೆ ಹೋಗಿ ತೆಗೆಯ ಬೇಕಾಯಿತು. ..... ನಾನು ಹಿಂದೂ ಎನ್ನಲು  ಹೆಮ್ಮೆಯಾಗುತ್ತದೆ..... ಜೈ ಹಿಂದ್ ವಂದೇ ಗುರು ಪರಂಪರ.

ದೀಪದ ರಹಸ್ಯ

ದೀಪಕ್ಕೊಂದು ಅಜ್ಞಾತ ಅಗಾಧ ಶಕ್ತಿಯಿದೆ. ಕತ್ತಲೆಯನ್ನು ಬೆಳಗುವ ದೀಪ ಮನಸ್ಸಿನ ಎಲ್ಲ ಕಲ್ಮಶಗಳನ್ನೂ ದೂರ ಸರಿಸಿ ಶಾಂತಿ ಮೂಡಿಸುವ ಶಕ್ತಿ ದೀಪಕ್ಕಿದೆ. ದೀಪ ಎಂದರೆ ಶಾಂತಿ, ದೀಪ ಎಂದರೆ ಸಮೃದ್ಧಿ, ದೀಪ ಎಂದರೆ ಬೆಳಕು, ದೀಪ ಎಂದರೆ ಆರೋಗ್ಯ, ದೀಪ ಎಂದರೆ ಸಂಪತ್ತು, ದೀಪ ಎಂದರೆ ಪ್ರಖರತೆ ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಕೆ.   ಇಂಥ ದೀಪವನ್ನು ಬೆಳಗಿಸುವುದು ದಿನವೂ ನಿಮ್ಮ ಜೀವನಕ್ಕೊಂದು ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.

ವಂದೇ ಮಾತರಂ

ಅಮ್ಮ ವತ್ಸಲೆಯಾದ ಮಾತೃಭೂಮಿಯೇ.! ನಿನಗೆ ನಾನು ಸದಾ ವಂದಿಸುವೆ. ಹೇ, ಹಿಂದೂಭೂಮಿಯೇ! ನಿನ್ನಿಂದ ನಾನು ಸುಖದಲ್ಲಿ ಬೆಳೆಸಲ್ಪಟ್ಟಿದ್ದೇನೆ. ಹೇ ಮಹಾ ಮಂಗಲೆಯಾದ ಪುಣ್ಯಭೂಮಿಯೇ ನಿನಗಾಗಿ ನನ್ನೀ ದೇಹವು ಅರ್ಪಿತವಾಗಲಿ. ನಿನಗೆ ಅನೇಕ ಪ್ರಣಾಮಗಳು. ಹೇ, ಸರ್ವಶಕ್ತಿವಂತನಾದ ಪರಮೇಶ್ವರನೆ! ಹಿಂದು ರಾಷ್ಟ್ರದ ಅವಯವಗಳಂತಿರುವ ನಾವು ನಿನಗೆ ಆದರದಿಂದ ನಮಸ್ಕಾರಿಸುತ್ತೇವೆ. ನಿನ್ನ ಕಾರ್ಯಕ್ಕಾಗಿ ನಾವು ನಡು ಕಟ್ಟಿದ್ದೇವೆ. ಅದನ್ನು ಪೂರ್ಣಗೊಳಿಸಲು ನಮಗೆ ಶುಭಾಶೀರ್ವಾದವನ್ಜು ನೀಡು. ವಿಶ್ವವು ಜಯಿಸಲಾಗದಂತಹ ಶಕ್ತಿಯನ್ನು , ಇಡೀ ಜಗತ್ತೇ ತೆಲೆಬಾಗುವಂತಹ ವಿಶುದ್ಧ ಶೀಲವನ್ನು ಮತ್ತು ನಾವಾಗಿಯೇ ಸ್ವೀಕರಿಸಿರುವ ಕಂಟಕಮಯ ಮಾರ್ಗವನ್ನು ಸುಗುಮಗೊಳಿಸಬಲ್ಲ ಜ್ಞಾನವನ್ನು ನಮಗೆ ದಯಪಾಲಿಸು.!  ಅಭ್ಯುದಯದೊಡನೆ ನಿಃಶ್ರೇಯಸ್ಸನ್ನು ಸಾಧಿಸಲು ಏಕಮಾತ್ರ ಶ್ರೇಷ್ಠ ಸಾಧನವಾದ ಉಗ್ರವೀರವ್ರತವು ನಮ್ಮ ಅಂತಃಕರಣದಲ್ಲಿ ಸ್ಫುರಿಸಲಿ. ಅಕ್ಷಯವಾದ ಪ್ರಖರವಾದ ಧ್ಯೇಯನಿಷ್ಠೆಯು ನಮ್ಮ ಹೃದಯದಲ್ಲಿ ಸದಾ ಎಚ್ಚರವಾಗಿರಲಿ. ವಿಜಯಶಾಲಿಯಾದ ನಮ್ಮ ಸಂಘಟಿತ ಕಾರ್ಯಶಕ್ತಿಯು ನಮ್ಮ ಧರ್ಮವನ್ನು ಸಂರಕ್ಷಿಸಿ ನಮ್ಮೀ ರಾಷ್ಟ್ರವನ್ನು ಪರಮವೈಭವಕ್ಕೇರಿಸಲು ನಿನ್ನ ಆಶೀರ್ವಾದದಿಂದ ಅತ್ಯಂತ ಸಮರ್ಥವಾಗಲಿ.!  ಭಾರತ ಮಾತಾಕಿ ಜೈ🚩🚩🚩🚩🚩 ಜೈಭಗವಾಕೇಸರಿ 🚩🚩🚩🚩🚩

ಗುರುರೇಕಃ ಸದಾ ಸೇವ್ಯಃ ಸಂಸಾರೋದ್ಧಾರಣಕ್ಷಮಃ

ತಂದೆ, ತಾಯಿ, ಸ್ನೇಹಿತ, ಅಣ್ಣ, ತಮ್ಮ ಎಲ್ಲರೂ ಸಂಸಾರಕ್ಕೆ ಕಾರಣರು. ಗುರುಗಳೊಬ್ಬರೇ ಸಂಸಾರದಿಂದ ಉದ್ಧಾರ ಮಾಡಲು ಸಮರ್ಥರು. ಆ ಕಾರಣ ಗುರುವೇ ನಮ್ಮಿಂದ ಪೂಜಿಸಲು ಅರ್ಹ’ (ಪಿತಾ ಮಾತಾ ಸುಹೃತ್ ಭ್ರಾತಾ ಸರ್ವೆ ಸಂಸಾರಹೇತವಃ | ಗುರುರೇಕಃ ಸದಾ ಸೇವ್ಯಃ ಸಂಸಾರೋದ್ಧಾರಣಕ್ಷಮಃ ||). ಈ ಮಾತು ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಇರುವ ಮಹತ್ತ್ವವನ್ನು ತೋರಿಸುತ್ತದೆ. ಉಳಿದವರು ಮಾಡುವ ಉಪಕಾರ ಈ ದೇಹಕ್ಕೆ ಮಾತ್ರ ಸಂಬಂಧಪಟ್ಟದ್ದು. ಆದರೆ ಗುರುಗಳು ಮಾಡುವ ಉಪಕಾರ ಜನ್ಮಜನ್ಮಾಂತರಕ್ಕೂ, ಮೋಕ್ಷಕ್ಕೂ ಸಂಬಂಧಪಡುವ ಉಪಕಾರ. ಒಂದು ದಿನ ಅಲೆಗ್ಸಾಂಡರ್ ಮಹಾರಾಜನು ದಾರಿಯಲ್ಲಿ ನಡೆದುಹೋಗುತ್ತಿದ್ದಾನೆ. ಮಧ್ಯದಲ್ಲಿ ಆತನ ಗುರು ಅರಿಸ್ಟಾಟಲ್​ನ ಭೇಟಿ ಆಗುತ್ತದೆ. ತಕ್ಷಣವೇ ಅಜೇಯ ದೊರೆ ಅಲೆಗ್ಸಾಂಡರನು ಮಂಡಿಯೂರಿ ತಲೆ ಬಾಗಿದಾಗ ಜನರು ಬೆರಗಾದರು. ರಾಜನ ವಂದನೆಯನ್ನು ಸ್ವೀಕರಿಸಿದ ಗುರು ಅರಿಸ್ಟಾಟಲ್ ಒಂದೂ ಮಾತನಾಡದೆ ಹೊರಟುಹೋದರು. ಆ ಬಳಿಕ ರಾಜನಿಗೆ ಮಂತ್ರಿ ಕೇಳಿದ, ‘ಮಹಾಪ್ರಭು! ತಾವು ಅಜೇಯ ವೀರರು. ನಿಮ್ಮ ತಂದೆ ನಿಮಗೆ ಸುಂದರ ದೇಹವನ್ನಿತ್ತು ಯುದ್ಧಕಲೆಯನ್ನು ಕಲಿಸಿ ಬೆಳೆಸಿ, ಸಮಸ್ತ ಐಶ್ವರ್ಯಗಳನ್ನು ಕೊಟ್ಟು ನಿಮ್ಮನ್ನು ಏಕಛತ್ರಾಧಿಪತಿಗಳನ್ನಾಗಿ ಮಾಡಿದ್ದಾರೆ. ಅಂತಹ ತಂದೆಗಿಂತ ಹೆಚ್ಚಿನ ಗೌರವವನ್ನು ಆ ಭಿಕ್ಷು ಅವದೂತ ನಾದಾನಂದ ಗುರುಗಳು ಕವೇಷದ ಬಡ ಗುರುವಿಗೆ ಕೊಡುತ್ತಿರುವಿರಿ. ಏಕೆ?’ ಆಗ ಅಲೆಗ್ಸಾಂಡರ್, ‘ಮಂತ್ರಿಗಳೆ!...

ಭಕ್ತಿ ಜ್ಞಾನ ಸಮನ್ವಯ

ಆಧ್ಯಾತ್ಮಿಕತೆಯೇ ಭಾರತದ  ಆದರ್ಶವೆಂದು ವಿಶ‍್ವವಿಖ್ಯಾತ  ಸ್ವಾಮಿ ವಿವೇಕಾನಂದರು ಹೇಳಿದ್ದರು.  ಆ ಆದರ್ಶವನ್ನು ಭಾರತೀಯರು ಮರೆತಾಗಲ್ಲೆಲ್ಲ ಆಧ್ಯಾತ್ಮಿಕತೆಯ ಪತಾಕೆಯನ್ನು ಬಾರಿ ಬಾರಿಗೂ ಎತ್ತರವಾಗಿ  ಎತ್ತಿ ಹಿಡಿಯಲು ಅವತಾರಪುರುಷರು ಬಹು ಬಾರಿ ಜನ್ಮವೆತ್ತಿದ್ದಾರೆ. ಆದ್ದರಿಂದ  ಭಾರತವು  ಆಧ್ಯಾತ್ಮಿಕತೆಯ ಒಂದು ವಿಗ್ರಹ ಸ್ವರೂಪವೇ ಆಗಿದೆ.  ಈ ಆಧ್ಯಾತ್ಮಿಕತೆಯ ಆಧಾರವೇ  ಜ್ಞಾನ ಮತ್ತು ಭಕ್ತಿ. ಜ್ಞಾನ ಭಕ್ತಿಗಳ ಪ್ರಚಾರಕ್ಕಾಗಿಯೇ ಶ್ರೀ ಪರಮಾತ್ಮನು ಸ್ವತಃ ಗುರುರೂಪವನ್ನು  ತಾಳಿ ಬರುತ್ತಾನೆ. ಆತನೇ ಆಧ್ಯಾತ್ಮಿಕತೆಯ ಅಧಿಪತಿ. ಆತನ ಉಪದೇಶವನ್ನು  ಜೀವನದಲ್ಲಿ ಅನುಸರಿಸಿ  ಜನರು  ಈ ಭವಬಂಧನದಿಂದ  ಮುಕ್ತರಾಗುತ್ತಾರೆ. ಪರಮಾತ್ಮನ ವೈವಿಧ‍್ಯ ಒಂದು  ದೃಷ್ಟಿಯಿಂದ ಈ ಜಗತ್ತಿನ  ಸರ್ವ ಪ್ರಾಣಿಗಳೂ  ಶ್ರೀ ಪರಮಾತ್ಮನ ಸ್ವರೂಪಗಳೇ. ಗೀತೆಯಲ್ಲಿ ‘ವಿಷ್ಟಭ್ಯಾಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್’ ಎಂದು ಹೇಳಿದಂತೆ, ಆತನೇ  ಈ ಸಮಸ್ತ ಪ್ರಪಂಚವನ್ನು ಆತನ ಒಂದೇ ಒಂದು ಅಂಶದಿಂದ  ಧಾರಣೆ ಮಾಡಿ ನೆಲಸಿದ್ದಾನೆ. ಮತ್ತೊಂದು  ದೃಷ್ಟಿಯಿಂದ ‘ಸರ್ವಸ್ಯ ಚಾಹಂಹೃದಿಸನ್ನಿವಿಷ್ಟಃ’ ಆತನೇ  ಅಂತರ್ಯಾಮಿಯಾಗಿ  ಸರ್ವಪ್ರಾಣಿಗಳ ಹೃದಯದಲ್ಲಿ  ನೆಲಸಿದ್ದಾನೆ. ಅದೂ ಅಲ್ಲದೆ , ಧರ್ಮ ಮತ್ತು ಶಾಂತಿಯನ್ನು  ಸ್ಥಾಪಿಸುವುದ...

ನನ್ನ ಹೆಮ್ಮೆಯ ಹಿಂದುಸ್ಥಾನ ಮತ್ತು ಪ್ರಸ್ತುತ ಸನ್ನಿವೇಶದ ಕಿರುನೋಟ

ಹಿಂದೂಸ್ಥಾನವು ಸಹಸ್ರಾರು ವರ್ಷಗಳ ಕಾಲ ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿತ್ತು. ಅದಕ್ಕಾಗಿ ಹಿಂದುಗಳು ಹೆಮ್ಮೆ ಪಡಬೇಕು. ಧರ್ಮಕ್ಕೆ ವಿಶಾಲವಾದ ಅನಂತ ವಾದ ಅರ್ಥ ಇದೆ; ಅದರಲ್ಲಿ ಕೆಲವು ನಾವು ತಿಳಿಯುವ ಪ್ರಯತ್ನ ಮಾಡೋಣ. ಧರ್ಮ ಎನ್ನು ವುದು ಒಂದು ಶ್ರೇಷ್ಟ ಜೀವನ ವಿಧಾನ ವಾಗಿದೆ. ಅದರ ಮೂಲ ನೆಲೆ  ನಮ್ಮ ಪವಿತ್ರ ಹಿಂದೂಸ್ಥಾನ (ಭಾರತ ದೇಶ). ವಿಶ್ವದಲ್ಲಿಯೇ ಅತೀಪ್ರಾಚೀನ ನಾಗರಿಕತೆ ಭಾರತೀಯ ನಾಗರಿಕತೆಯಾಗಿದೆ. ವಿಶ್ವದಲ್ಲಿಯೇ ಅತೀಪ್ರಾಚೀನ ಸುಸಂಸ್ಕೃತ ಜನ ವಾಸಿಸಿದ ನೆಲ ಭಾರತವಾಗಿದೆ, ವಿಶ್ವದಲ್ಲಿಯೇ ಅತೀ ಪ್ರಾಚೀನ ಸಾಹಿತ್ಯಗಳಾದ ವೇದಗಳು ಭಾರತದಲ್ಲಿ ರಚಿಸಲ್ಪಟ್ಟಿವೆ, ವಿಶ್ವದಲ್ಲಿಯೇ ಅತೀ ಪ್ರಾಚೀನ ಭಾಷೆ ಸಂಸ್ಕೃತ ವಾಗಿದೆ. ಸಂಸ್ಕೃತ ವೆಂದರೆ ಸಂಸ್ಕರಿಸಲ್ಪಟ್ಟದ್ದು ಎಂದು ಅರ್ಥ. ಭಾಷೆಯು ಸಂಸ್ಕರಿಸಲ್ಲಪಟ್ಟು ಅತ್ಯುಕೃಷ್ಟವಾಗಿ ರೂಪಿತ ವಾದುದು ಸಂಸ್ಕೃತ ಭಾಷೆ. ಇದು ಭಾರತೀಯ ವೈಜ್ಞಾನಿಕ ಜ್ಞಾನ ಭಂಡಾರದ ಭಾಷಾ ಕಣಜ ವಾಗಿದೆ. ಸಂಸ್ಕೃತ ಇಂದಿನ ಗಣಕ ಯಂತ್ರಗಳಿಗೆ ಗಳಿಗೆ (ಕಂಪ್ಯೂಟರ್) ಅತ್ಯಂತ ಸೂಕ್ತ ಭಾಷೆ ಎಂಬುದಾಗಿ ಅಮೇರಿಕಾ ಶೋಧಿಸಿ ಘೋಷಿಸಿದೆ. ಸಂಸ್ಕೃತ ಭಾಷಾ ಸಾಹಿತ್ಯಗಳ ಮೂಲಕ ಜಗತ್ತಿಗೆ  ಜ್ಞಾನ, ಆರೋಗ್ಯ, ರಾಜಕೀಯ , ಅರ್ಥಶಾಸ್ತ್ರ,  ಯುಧ್ಧಕಲೆ, ಗಣಿತ ಭೂಗೋಳ, ಬಾಹ್ಯಾಕಾಶ ಸಂಶೋಧನೆ, ಹೀಗೆ ಎಲ್ಲವನ್ನೂ ಬೋಧೀಸಿದ ದೇಶ ಭಾರತ , ಹಾಗೂ ಹಿಂದೂ ಸಂಸ್ಕೃತಿ, ಸಾವಿರಾರು ವರ್ಷಗಳ ಹಿಂದೆ ಇಂದಿನ ಅನ್ಯ ಮತಗಳ ಜನರು ಕಾ...